<p><strong>ಆಳಂದ</strong>: ‘ಮನೆ, ಅಂಗಡಿ, ಹೋಟೆಲ್, ಹೊಲಗದ್ದೆ ಸೇರಿದಂತೆ ಆಕಸ್ಮಿಕ ಬೆಂಕಿ ಅವಘಡಗಳು ತಡೆಗಟ್ಟಲು ಜನಸಾಮಾನ್ಯರು ಸಹ ಅಗತ್ಯ ಮುನ್ನೆಚ್ಚೆರಿಕೆ ವಹಿಸುವುದು ಅಗತ್ಯವಾಗಿದೆ’ ಎಂದು ಆಳಂದ ಅಗ್ನಿಶಾಮಕ ಠಾಣಾಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.</p>.<p>ಪಟ್ಟಣದ ವಿವೇಕ ವರ್ಧನಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಳಂದ ಅಗ್ನಿ ಶಾಮಕ ದಳದಿಂದ ಏರ್ಪಡಿಸಿದ್ದ ಅಗ್ನಿ ಅವಘಡ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮನೆಯಲ್ಲಿ ಸಿಲಿಂಡರ್ ಸ್ಫೋಟ, ವಿದ್ಯುತ್ ಸ್ಪರ್ಶ ಮತ್ತಿತರ ಬೆಂಕಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ದಳಕ್ಕೆ ಸಂಪರ್ಕಿಸುವದು ಅಗತ್ಯವಾದದು, ಇದರ ಜತೆಗೆ ಸಣ್ಣಪುಟ್ಟ ಬೆಂಕಿಯು ಆರಂಭದಲ್ಲಿ ನಿಯಂತ್ರಿಸಲು ಸಹ ಮುಂದಾಗಬೇಕು. ಇದರಿಂದ ಹೆಚ್ಚಿನ ಅನಾಹುತ ತಪ್ಪುತ್ತದೆ’ ಎಂದರು.</p>.<p>ಪ್ರಾಚಾರ್ಯ ಸಂತೋಷ ಪಾಟೀಲ ಮಾತನಾಡಿದರು. ಅಗ್ನಿ ಶಾಮಕದಳದ ಅಧಿಕಾರಿಗಳಾದ ಶೇಖ ಇಮಾಮ್ ಅಲಿ, ವೈಜುನಾಥ ಜಿಡಗೆ, ಪ್ರಭಾಕರ ಜವಳಿ, ಸುಭಾಷ ಮಾನೆ, ಸಿಬ್ಬಂದಿಗಳಾದ ಎಂ.ಡಿ.ಇಬ್ರಾಹಿಂ, ಸೈಫಾನ್ ಮುಲ್ಕ್, ಮಲ್ಲಿಕಾರ್ಜುನ, ಸಿದ್ದರಾಮ, ಅವಿನಾಶ, ಅಮೀರ್, ರವೀಂದ್ರ, ಭೀಮಾಶಂಕರ , ಸುಭಾಷಚಂದ್ರ ಬೋಸ್, ಶಿವರಾಜ, ಸಿದ್ದಪ್ಪ ಉಪಸ್ಥಿತರಿದ್ದರು.</p>.<p>ಶಾಲಾ ಆವರಣದಲ್ಲಿ ವಿವಿಧ ಬೆಂಕಿ ಅನಾಹುತಗಳು ತಡೆ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ‘ಮನೆ, ಅಂಗಡಿ, ಹೋಟೆಲ್, ಹೊಲಗದ್ದೆ ಸೇರಿದಂತೆ ಆಕಸ್ಮಿಕ ಬೆಂಕಿ ಅವಘಡಗಳು ತಡೆಗಟ್ಟಲು ಜನಸಾಮಾನ್ಯರು ಸಹ ಅಗತ್ಯ ಮುನ್ನೆಚ್ಚೆರಿಕೆ ವಹಿಸುವುದು ಅಗತ್ಯವಾಗಿದೆ’ ಎಂದು ಆಳಂದ ಅಗ್ನಿಶಾಮಕ ಠಾಣಾಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.</p>.<p>ಪಟ್ಟಣದ ವಿವೇಕ ವರ್ಧನಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಳಂದ ಅಗ್ನಿ ಶಾಮಕ ದಳದಿಂದ ಏರ್ಪಡಿಸಿದ್ದ ಅಗ್ನಿ ಅವಘಡ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮನೆಯಲ್ಲಿ ಸಿಲಿಂಡರ್ ಸ್ಫೋಟ, ವಿದ್ಯುತ್ ಸ್ಪರ್ಶ ಮತ್ತಿತರ ಬೆಂಕಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ದಳಕ್ಕೆ ಸಂಪರ್ಕಿಸುವದು ಅಗತ್ಯವಾದದು, ಇದರ ಜತೆಗೆ ಸಣ್ಣಪುಟ್ಟ ಬೆಂಕಿಯು ಆರಂಭದಲ್ಲಿ ನಿಯಂತ್ರಿಸಲು ಸಹ ಮುಂದಾಗಬೇಕು. ಇದರಿಂದ ಹೆಚ್ಚಿನ ಅನಾಹುತ ತಪ್ಪುತ್ತದೆ’ ಎಂದರು.</p>.<p>ಪ್ರಾಚಾರ್ಯ ಸಂತೋಷ ಪಾಟೀಲ ಮಾತನಾಡಿದರು. ಅಗ್ನಿ ಶಾಮಕದಳದ ಅಧಿಕಾರಿಗಳಾದ ಶೇಖ ಇಮಾಮ್ ಅಲಿ, ವೈಜುನಾಥ ಜಿಡಗೆ, ಪ್ರಭಾಕರ ಜವಳಿ, ಸುಭಾಷ ಮಾನೆ, ಸಿಬ್ಬಂದಿಗಳಾದ ಎಂ.ಡಿ.ಇಬ್ರಾಹಿಂ, ಸೈಫಾನ್ ಮುಲ್ಕ್, ಮಲ್ಲಿಕಾರ್ಜುನ, ಸಿದ್ದರಾಮ, ಅವಿನಾಶ, ಅಮೀರ್, ರವೀಂದ್ರ, ಭೀಮಾಶಂಕರ , ಸುಭಾಷಚಂದ್ರ ಬೋಸ್, ಶಿವರಾಜ, ಸಿದ್ದಪ್ಪ ಉಪಸ್ಥಿತರಿದ್ದರು.</p>.<p>ಶಾಲಾ ಆವರಣದಲ್ಲಿ ವಿವಿಧ ಬೆಂಕಿ ಅನಾಹುತಗಳು ತಡೆ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>