ಈ ಯೋಜನೆ ಪ್ರಕಾರ ಹೊಸ ಸೈನಿಕರನ್ನ ಆರು ತಿಂಗಳ ತರಬೇತಿ ನೀಡಿ ಅಗ್ನಿವೀರರ ಹೆಸರಿನಲ್ಲಿಅವರನ್ನು ನೌಕಾದಳ, ಭೂದಳ ಹಾಗೂ ವಾಯುದಳದ ಸೈನಿಕರನ್ನಾಗಿ 64 ಸಾವಿರ ಸೈನಿಕರನ್ನು ನೇಮಕ ಮಾಡಿ ನಾಲ್ಕು ವರ್ಷದ ನಂತರ ಅವರನ್ನು ಸೇವೆಯಿಂದ ಬಿಡುಗಡೆ ಮಾಡುತ್ತಾರೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮುನ್ನ ಪ್ರಾಯೋಗಿಕ ನೆಲೆಯಲ್ಲಿ ನೇಮಕ ನಡೆಸಬೇಕಿತ್ತು. ಏಕೆಂದರೆ ಪಾಕಿಸ್ತಾನ, ಚೀನಾ ಹಾಗೂ ನೇಪಾಳದಂತ ದೇಶಗಳ ಗಡಿಯನ್ನು ಭಾರತ ಹಂಚಿಕೊಂಡಿದೆ. ಚೀನಾ ಈಗಾಗಲೇ ಭಾರತದ ಗಡಿ ಒಳಗೆ ಬಂದು ಗ್ರಾಮಗಳನ್ನೇ ನಿರ್ಮಿಸಿಕೊಂಡಿದೆ. ಹೀಗಿರುವಾಗ ಒಪ್ಪಂದದ ಮೇಲೆ ಸೈನಿಕರನ್ನು ನೇಮಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.