ಆಳಂದ: ತಾಲ್ಲೂಕಿನ ರಾಚಣ್ಣಾ ವಾಗ್ದರ್ಗಿ ಗ್ರಾಮದಲ್ಲಿ ನ.17ರಂದು ನಡೆಯಬೇಕಿದ್ದ ರಾಚೋಟೇಶ್ವರ ಜಾತ್ರೆಯನ್ನು ಕೊರೊನಾ ಕಾರಣ ರದ್ದುಗೊಳಿಸಲಾಗಿದೆ.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಜಾತ್ರಾ ಸಮಿತಿ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಕ್ತರು ದೇವಸ್ಥಾನಕ್ಕೆ ಬರದೆ ತಮ್ಮ ಮನೆಯಲ್ಲಿಯೇ ಪೂಜೆ ಸಲ್ಲಿಸಬೇಕು ಎಂದು ರಾಚೋಟೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ದರಾಮ ಕಂದಗೋಳೆ ಮನವಿ ಮಾಡಿದ್ದಾರೆ.
ಬೆಣ್ಣೆತೊರಾ ನದಿ ದಡದಲ್ಲಿರುವ ರಾಚೋಟೇಶ್ವರ ದೇವಸ್ಥಾನದ ಜಾತ್ರೆ ದೀಪಾವಳಿ ಹಬ್ಬದ ಮರುದಿನ ನಡೆಯುತ್ತದೆ. ಕಲಬುರ್ಗಿ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಿದ್ದರು.