ಕಲಬುರಗಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಗರದ ಶಹಾಬಜಾರ್ನ ಲಾಲ್ ಹನುಮಾನ್ ಮಂದಿರದ ಬಳಿ ರೌಡಿ ಶೀಟರ್ ರಾಘು (28) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭಾನುವಾರ ಬೆಳಿಗ್ಗೆ ಕೊಲೆ ಮಾಡಿ ಪರಾರಿದ್ದಾರೆ.
ರಾಘು ರೌಡಿಶೀಟರ್ ಮಾರ್ಕೆಟ್ ಸತ್ಯಾನ ಸಹಚರನಾಗಿದ್ದ. ಕೊಲೆ, ಸುಲಿಗೆ, ಕಳ್ಳತನ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.