ಮಡಿಕೇರಿ: ಭಾರತ ತಂಡದ ಹಾಕಿ ಆಟಗಾರ, ಕೊಡಗಿನ ಎಸ್.ವಿ.ಸುನಿಲ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ ಕೊಂಚಾಡಿಯ ತಾರಾನಾಥ್ ಆಚಾರ್ಯ ಹಾಗೂ ಸುನಿತಾ ದಂಪತಿ ಪುತ್ರಿ ನಿಶಾ ಅವರ ಕೈಹಿಡಿಯಲಿದ್ದಾರೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಸಮೀಪದ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯಲಿದೆ. ಬೆಳಿಗ್ಗೆ 8.50ಕ್ಕೆ ಮುಹೂರ್ತ ನಿಗದಿಯಾಗಿದೆ. ಹಿರಿಯರು ನಿಶ್ಚಯಿಸಿರುವ ಹುಡುಗಿಯೊಂದಿಗೆ ಸುನಿಲ್ ವಿವಾಹ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಡಿಕೇರಿಯ ಕಾವೇರಿ ಹಾಲ್ನಲ್ಲಿ ಸೋಮವಾರ ರಾತ್ರಿ 7 ಗಂಟೆಗೆ ಅರತಕ್ಷತೆ ನಡೆಯಲಿದೆ.