ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಯ್ಯಪ್ಪ ಸ್ವಾಮೀಜಿ ನಿಧನ

Last Updated 1 ನವೆಂಬರ್ 2020, 3:25 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕಿನ ಕಟ್ಟಿಸಂಗಾವಿಯ (ಭೀಮಾ ಬ್ರಿಜ್) ಪ್ರಭು ಬಸಯ್ಯತಾ ತನವರ ಮಠದ ಪೀಠಾಧಿಪತಿ ಸಿದ್ದಯ್ಯಪ್ಪ ಸ್ವಾಮೀಜಿ (80) ಶನಿವಾರ ಬೆಳಗಿನ ಜಾವ ನಿಧನರಾದರು. ಶ್ರೀಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಶ್ರೀಮಠದ ಆವರಣದಲ್ಲಿ ಜರುಗಲಿದೆ.

ಲಿಂ.ಸಿದ್ದಯ್ಯಪ್ಪ ಸ್ವಾಮೀಜಿ ಸಂಸಾರಸ್ಥರಾಗಿದ್ದು, ಅವರಿಗೆ ಐವರು ಪುತ್ರರು ಇದ್ದಾರೆ. 55 ವರ್ಷಗಳಿಂದ ಶ್ರೀಮಠದ ಪೀಠಾಧಿಪತಿಯಾಗಿದ್ದರು. ಮಠದಲ್ಲಿ ನಿರಂತರವಾಗಿ ಅನ್ನ ದಾಸೋಹ ಸೇವೆ ನಡೆಸಿಕೊಂಡು ಬಂದಿದ್ದರು. ಜೇವರ್ಗಿ, ಕಟ್ಟಿಸಂಗಾವಿ, ಸೋಮನಾಥಹಳ್ಳಿ, ನಡುವಿನಹಳ್ಳಿ, ಕಡೆಹಳ್ಳಿ, ಚನ್ನೂರ, ಬುಟ್ನಾಳ, ಗೋಗಿ, ಹರನೂರ, ತಿಳಗುಳ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರೀಗಳಿಗೆ ಭಕ್ತರು ಇದ್ದಾರೆ. ಪ್ರತಿ ವರ್ಷ ಯುಗಾದಿ ನಂತರ 11ನೇ ದಿನಕ್ಕೆ ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಂಟೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪ್ರಭು ಬಸಯ್ಯ ತಾತನವರ ಜಾತ್ರೆ, ರಥೋತ್ಸವ ಹಾಗೂ ಧಾರ್ಮಿಕ ಸಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT