ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್, ‘ಟಾಟಾ, ಬಿರ್ಲಾ, ಅಂಬಾನಿ, ಮಹೀಂದ್ರಾ ಮೊದಲಾದ ಕೈಗಾರಿಕಾ ಮನೆತನಗಳಿಗೆ, ‘ಅವರ ಅನುಭವವನ್ನು, ಆಡಳಿತ ನೈಪುಣ್ಯವನ್ನು ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂತ್ರಗಾರಿಕೆಯ ದಿಕ್ಕನ್ನು ತರುವ' ನೆಪದೊಂದಿಗೆ, ಬ್ಯಾಂಕುಗಳನ್ನು ತೆರೆಯಲು ಆರ್ಬಿಐ ಅನುಮತಿ ನೀಡಲು ತೀರ್ಮಾನಿಸಿರುವುದು ಬ್ಯಾಂಕುಗಳ ಗ್ರಾಹಕರಿಗೆ ಮತ್ತು ಒಟ್ಟಾರೆ ಜನಸಾಮಾನ್ಯರಿಗೆ ಒಂದು ವಿನಾಶಕಾರಿ ಭವಿಷ್ಯದ ಸೂಚನೆಯಾಗಿದೆ. ಬಿಜೆಪಿ ಸರ್ಕಾರ ಹಸಿರು ನಿಶಾನೆ ತೋರಿಸಿರುವ ಈ ನಡೆಯು ಆಳುವ ಹಣಕಾಸು ಸರ್ವಾಧಿಕಾರವನ್ನು ಇನ್ನಷ್ಟು ಬಲಪಡಿಸುವುದರಲ್ಲಿ ಸಂಶಯವಿಲ್ಲ’ ಎಂದಿದ್ದಾರೆ.