ಇಲ್ಲಿನ ಜಗಯತ್ ವೃತ್ತದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮೋದಿ ಅವರಿಂದ ಒಬ್ಬನೇ ಒಬ್ಬ ಮುಸ್ಲಿಮನಿಗೂ ಅನ್ಯಾಯ ಆಗಿಲ್ಲ. ಆಗಲು ಅವರು ಬಿಡುವುದಿಲ್ಲ. ಪಕ್ಕದ ಮುಸ್ಲಿಂ ರಾಷ್ಟ್ರಗಳಲ್ಲಿ ದೌರ್ಜನ್ಯ ಅನುಭವಿಸಿದವರಿಗೆ ಆಶ್ರಯ ಕೊಡುವುದು ಅಸಾಂವಿಧಾನಿಕ ಹೇಗಾಗುತ್ತದೆ? ಇದು ಜಾತ್ಯಾತೀಯ ನಿಲುವೇ ಅಲ್ಲವೇನು? ಕಾಂಗ್ರೆಸಿಗರ ಸುಳ್ಳಿಗೆ ಇಷ್ಟು ವರ್ಷ ಮರುಳಾಗಿದ್ದೀರಿ. ಈಗಲಾದರೂ ಅರ್ಥ ಮಾಡಿಕೊಳ್ಳಿ...' ಎಂದರು.