ಚಿತ್ತಾಪುರ: ‘ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕತೆಯ ಮೇಲೆ ದುಷ್ಪಪರಿಣಾಮ ಬೀರುತ್ತದೆ. ಕೃಷಿ ಸಾಲ ಮನ್ನಾ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾಷಣ ಮಾಡುತ್ತಾರೆ. ನಾನು ಅವರಿಗೆ ಸೂರ್ಯ ಅಲ್ಲ, ಅಮವಾಸ್ಯೆ ಅಂತ ಕರೆಯುತ್ತೇನೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
‘ಮೋದಿ ಸರ್ಕಾರವು ಬಂಡವಾಳಶಾಹಿಗಳ, ಕೈಗಾರಿಕೋದ್ಯಮಿಗಳ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ರೈತರ ಸಾಲ ಮನ್ನಾ ಮಾಡಿದ ಒಂದೂ ನಿದರ್ಶನವಿಲ್ಲ. ತೇಜಸ್ವಿ ಸೂರ್ಯ ಹೇಳಿರುವ ರೈತರ ಸಾಲ ಮನ್ನಾ ಬೇಡ ಎನ್ನುವ ವಿಚಾರ ಅವರದೊಬ್ಬರದ್ದಲ್ಲ. ಬಿಜೆಪಿಯ ಆಂತರಿಕ ಚಿಂತನೆಯಾಗಿದೆ’ ಎಂದರು.