ಕಳೆದ ಫೆ. 9ರಂದು ಮೂರನೇ ಬಾರಿ ಮೂರ್ತಿ ಕಳವು ಮಾಡಿದ್ದಾಗ ಅದನ್ನು ವಿರೂಪಗೊಳಿಸಲಾಗಿತ್ತು. ಈ ಬಗ್ಗೆ ಬಸವರಾಜ್ ಕೋರಿ ಅವರೇ ದೂರನ್ನೂ ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲೂ ಬಸವರಾಜ್ ಜೊತೆಗೆ ಇದ್ದು, ಅನುಮಾನ ಬಾರದಂತೆ ಇರುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರಹಸ್ಯವಾಗಿ ಕ್ಯಾಮೆರಾ ಅಳವಡಿಸಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿ ಬಸವರಾಜ್ ಅವರನ್ನು ಬಂಧಿಸಿದ್ದಾರೆ.