<p><strong>ಚಿಂಚೋಳಿ (ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಯುವಕರ ತಂಡವು ಯಾರ ನೆರವಿಗೂ ಕಾಯದೇ 8 ವರ್ಷಗಳಿಂದ ಸಾರ್ವಜನಿಕ ನೀರಿನ ಘಟಕವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ.</p>.<p>ಈ ಮೂಲಕ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಒತ್ತುನೀಡಿದೆ. ಘಟಕದಿಂದ ಬಂದ ಲಾಭವನ್ನು ಗ್ರಾಮದ ವೀರಭದ್ರೇಶ್ವರ ದೇಗುಲದ ಅಭಿವೃದ್ಧಿ, ಬಯಲು ಗ್ರಂಥಾಲಯ ನಡೆಸಲು ಬಳಸುತ್ತಿದೆ. </p>.<p>ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿವೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಘಟಕಗಳು ಕೆಟ್ಟಿವೆ. ಹಸರಗುಂಡಗಿ ಗ್ರಾಮದ ಘಟಕ ಇದಕ್ಕೆ ಅಪವಾದ.</p>.<p>8 ವರ್ಷಗಳ ಹಿಂದೆ ಸ್ಥಾಪನೆಯಾದ ಈ ನೀರಿನ ಶುದ್ಧೀಕರಣ ಘಟಕವನ್ನು ಅದೇ ಗ್ರಾಮದ ವೀರಭದ್ರೇಶ್ವರ ಗೆಳೆಯರ ಬಳಗ ಸೇವಾ ಸಂಸ್ಥೆ ನಿರ್ವಹಣೆ ಜತೆಗೆ, ಇತರೆ ಅಭಿವೃದ್ದಿಗೂ ಬಳಸಲು ಮುಂದಾಗಿದೆ.</p>.<p>ಹಸರಗುಂಡಗಿ ಗ್ರಾಮ, ಸುತ್ತಲಿನ ತಾಂಡಾಗಳವರು ಬೈಕ್ನಲ್ಲಿ ಬಂದು ಕ್ಯಾನ್ಗಳಲ್ಲಿ ನೀರು ಒಯ್ಯುತ್ತಿದ್ದಾರೆ. ‘ಕಲ್ಯಾಣ ಕರ್ನಾಟಕದ ಭಾಗದಲ್ಲಿ ಫ್ರಿಜ್ ಅಳವಡಿಸಿರುವ, ಯಶಸ್ವಿಯಾಗಿ ಮುನ್ನಡೆಯುತ್ತಿರುವ ಏಕೈಕ ಘಟಕ ತಮ್ಮದಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ ಬಿ.ರೆಡ್ಡಿ ವಡ್ಡನಕೇರಿ ಹೆಮ್ಮೆಯಿಂದ ಹೇಳುತ್ತಾರೆ.</p>.<p>ಘಟಕ ನಿರ್ವಹಣೆಗೆ ಗ್ರಾಮದ ಸಂತೋಷ ಸ್ವಾಮಿ ಅವರನ್ನು ನಿಯೋಜಿಸಿರುವ ಸಂಸ್ಥೆಯು, ಇವರಿಗೆ ಮಾಸಿಕ ₹6 ಸಾವಿರ ಗೌರವಧನವನ್ನು ನೀಡುತ್ತಿದೆ. 2023ರವರೆಗೆ ಮಾಸಿಕ ₹400ರಿಂದ ₹500 ವಿದ್ಯುತ್ ಬಿಲ್ ಬರುತ್ತಿತ್ತು. 2023ರ ನಂತರದಿಂದ ₹1600ರಿಂದ ₹1800 ಬರುತ್ತಿದೆ. ಇದನ್ನೂ ಸಂಸ್ಥೆಯೇ ಭರಿಸುತ್ತಿದೆ.</p>.<p>‘ಶುದ್ಧ ನೀರು ವಿತರಣೆಯಿಂದ ಬಂದ ಆದಾಯದಲ್ಲಿ ವೀರಭದ್ರೇಶ್ವರ ದೇವಾಲಯಕ್ಕೆ 30 ಎಲ್ಇಡಿ ಬಲ್ಬ್ ಹಾಗೂ 2 ಫೋಕಸ್ ಬಲ್ಬ್, ವೀರಭದ್ರೇಶ್ವರ ದೇವಾಲಯದ ಗರ್ಭಗುಡಿ ಎದುರು ಭಕ್ತರ ಅನುಕೂಲಕ್ಕಾಗಿ ಎಸ್ಎಸ್ ಗ್ರಿಲ್ ಅಳವಡಿಸಲಾಗಿದೆ. ವೀರಭದ್ರೇಶ್ವರ ದೇವಾಲಯದಲ್ಲಿ ಬಯಲು ಗ್ರಂಥಾಲಯ ನಡೆಸುವ ಸಮಾಜ ಮುಖಿ ಸೇವೆ ಸಲ್ಲಿಸಲಾಗುತ್ತಿದೆ’ ಎಂದು ಸೇವಾ ಸಂಸ್ಥೆಯ ಖಜಾಂಚಿ ಅಶೋಕ ಕೋರಿ ತಿಳಿಸಿದರು.</p>.<p><strong>ಇನ್ವರ್ಟರ್ ಅಳವಡಿಕೆ</strong></p><p>ಫ್ರಿಜ್ ಸೌಲಭ್ಯ ವಿದ್ಯುತ್ ವ್ಯತ್ಯಯವಾಗಿರುವ ಅವಧಿಯಲ್ಲೂ ನೀರು ಲಭಿಸುವಂತಾಗಲು ಇನ್ವರ್ಟರ್ ಅನ್ನು ಘಟಕದಲ್ಲಿ ಅಳವಡಿಸಲಾಗಿದೆ. ಶುದ್ಧೀಕರಿಸಿದ ನೀರು ತಂಪಾಗಿರಿಸಲು 2 ಟನ್ ಸಾಮರ್ಥ್ಯದ ಫ್ರಿಜ್ ಅನ್ನು ಖರೀದಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. 100 ಸಾಮಾನ್ಯ ಕ್ಯಾನ್ ನೀರು ತಂಪಾಗಿರುವ 100 ಕ್ಯಾನ್ ಖರೀದಿಸಿ ತಂದು ಗ್ರಾಮೀಣ ಜನರಿಗೆ ಸೇವೆ ಒದಗಿಸಲಾಗುತ್ತಿದೆ. ಹೀಗೆ ಹಲವು ಪ್ರಯತ್ನಗಳು ಯಶ ಕಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ (ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಯುವಕರ ತಂಡವು ಯಾರ ನೆರವಿಗೂ ಕಾಯದೇ 8 ವರ್ಷಗಳಿಂದ ಸಾರ್ವಜನಿಕ ನೀರಿನ ಘಟಕವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ.</p>.<p>ಈ ಮೂಲಕ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಒತ್ತುನೀಡಿದೆ. ಘಟಕದಿಂದ ಬಂದ ಲಾಭವನ್ನು ಗ್ರಾಮದ ವೀರಭದ್ರೇಶ್ವರ ದೇಗುಲದ ಅಭಿವೃದ್ಧಿ, ಬಯಲು ಗ್ರಂಥಾಲಯ ನಡೆಸಲು ಬಳಸುತ್ತಿದೆ. </p>.<p>ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿವೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಘಟಕಗಳು ಕೆಟ್ಟಿವೆ. ಹಸರಗುಂಡಗಿ ಗ್ರಾಮದ ಘಟಕ ಇದಕ್ಕೆ ಅಪವಾದ.</p>.<p>8 ವರ್ಷಗಳ ಹಿಂದೆ ಸ್ಥಾಪನೆಯಾದ ಈ ನೀರಿನ ಶುದ್ಧೀಕರಣ ಘಟಕವನ್ನು ಅದೇ ಗ್ರಾಮದ ವೀರಭದ್ರೇಶ್ವರ ಗೆಳೆಯರ ಬಳಗ ಸೇವಾ ಸಂಸ್ಥೆ ನಿರ್ವಹಣೆ ಜತೆಗೆ, ಇತರೆ ಅಭಿವೃದ್ದಿಗೂ ಬಳಸಲು ಮುಂದಾಗಿದೆ.</p>.<p>ಹಸರಗುಂಡಗಿ ಗ್ರಾಮ, ಸುತ್ತಲಿನ ತಾಂಡಾಗಳವರು ಬೈಕ್ನಲ್ಲಿ ಬಂದು ಕ್ಯಾನ್ಗಳಲ್ಲಿ ನೀರು ಒಯ್ಯುತ್ತಿದ್ದಾರೆ. ‘ಕಲ್ಯಾಣ ಕರ್ನಾಟಕದ ಭಾಗದಲ್ಲಿ ಫ್ರಿಜ್ ಅಳವಡಿಸಿರುವ, ಯಶಸ್ವಿಯಾಗಿ ಮುನ್ನಡೆಯುತ್ತಿರುವ ಏಕೈಕ ಘಟಕ ತಮ್ಮದಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ ಬಿ.ರೆಡ್ಡಿ ವಡ್ಡನಕೇರಿ ಹೆಮ್ಮೆಯಿಂದ ಹೇಳುತ್ತಾರೆ.</p>.<p>ಘಟಕ ನಿರ್ವಹಣೆಗೆ ಗ್ರಾಮದ ಸಂತೋಷ ಸ್ವಾಮಿ ಅವರನ್ನು ನಿಯೋಜಿಸಿರುವ ಸಂಸ್ಥೆಯು, ಇವರಿಗೆ ಮಾಸಿಕ ₹6 ಸಾವಿರ ಗೌರವಧನವನ್ನು ನೀಡುತ್ತಿದೆ. 2023ರವರೆಗೆ ಮಾಸಿಕ ₹400ರಿಂದ ₹500 ವಿದ್ಯುತ್ ಬಿಲ್ ಬರುತ್ತಿತ್ತು. 2023ರ ನಂತರದಿಂದ ₹1600ರಿಂದ ₹1800 ಬರುತ್ತಿದೆ. ಇದನ್ನೂ ಸಂಸ್ಥೆಯೇ ಭರಿಸುತ್ತಿದೆ.</p>.<p>‘ಶುದ್ಧ ನೀರು ವಿತರಣೆಯಿಂದ ಬಂದ ಆದಾಯದಲ್ಲಿ ವೀರಭದ್ರೇಶ್ವರ ದೇವಾಲಯಕ್ಕೆ 30 ಎಲ್ಇಡಿ ಬಲ್ಬ್ ಹಾಗೂ 2 ಫೋಕಸ್ ಬಲ್ಬ್, ವೀರಭದ್ರೇಶ್ವರ ದೇವಾಲಯದ ಗರ್ಭಗುಡಿ ಎದುರು ಭಕ್ತರ ಅನುಕೂಲಕ್ಕಾಗಿ ಎಸ್ಎಸ್ ಗ್ರಿಲ್ ಅಳವಡಿಸಲಾಗಿದೆ. ವೀರಭದ್ರೇಶ್ವರ ದೇವಾಲಯದಲ್ಲಿ ಬಯಲು ಗ್ರಂಥಾಲಯ ನಡೆಸುವ ಸಮಾಜ ಮುಖಿ ಸೇವೆ ಸಲ್ಲಿಸಲಾಗುತ್ತಿದೆ’ ಎಂದು ಸೇವಾ ಸಂಸ್ಥೆಯ ಖಜಾಂಚಿ ಅಶೋಕ ಕೋರಿ ತಿಳಿಸಿದರು.</p>.<p><strong>ಇನ್ವರ್ಟರ್ ಅಳವಡಿಕೆ</strong></p><p>ಫ್ರಿಜ್ ಸೌಲಭ್ಯ ವಿದ್ಯುತ್ ವ್ಯತ್ಯಯವಾಗಿರುವ ಅವಧಿಯಲ್ಲೂ ನೀರು ಲಭಿಸುವಂತಾಗಲು ಇನ್ವರ್ಟರ್ ಅನ್ನು ಘಟಕದಲ್ಲಿ ಅಳವಡಿಸಲಾಗಿದೆ. ಶುದ್ಧೀಕರಿಸಿದ ನೀರು ತಂಪಾಗಿರಿಸಲು 2 ಟನ್ ಸಾಮರ್ಥ್ಯದ ಫ್ರಿಜ್ ಅನ್ನು ಖರೀದಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. 100 ಸಾಮಾನ್ಯ ಕ್ಯಾನ್ ನೀರು ತಂಪಾಗಿರುವ 100 ಕ್ಯಾನ್ ಖರೀದಿಸಿ ತಂದು ಗ್ರಾಮೀಣ ಜನರಿಗೆ ಸೇವೆ ಒದಗಿಸಲಾಗುತ್ತಿದೆ. ಹೀಗೆ ಹಲವು ಪ್ರಯತ್ನಗಳು ಯಶ ಕಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>