<p><strong>ಕಲಬುರಗಿ:</strong> ಹುಬ್ಬಳ್ಳಿಯಲ್ಲಿ ಶನಿವಾರ ನಿಧನರಾದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನಮೋಹನ ಅವರಿಗೆ ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಹಿರಿಯ ಪತ್ರಕರ್ತ ಶ್ರೀಕಾಂತಾಚಾರಿ ಮಣ್ಣೂರ್ ಮಾತನಾಡಿ, ‘ಮದನಮೋಹನ ಅವರ ನಿಧನದಿಂದ ಪತ್ರಿಕೋದ್ಯಮ ಜಗತ್ತು ಒಬ್ಬ ಸ್ಪಷ್ಟ ಮತ್ತು ಪ್ರಾಮಾಣಿಕ ಪತ್ರಕರ್ತನನ್ನು ಕಳೆದುಕೊಂಡಿದೆ. ತಾವು ಬೆಳೆಯುವುದಲ್ಲದೇ ಹಲವು ಪತ್ರಕರ್ತರನ್ನು ಬೆಳೆಸಿದರು’ ಎಂದು ಹೇಳಿದರು.</p>.<p>ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಮಾತನಾಡಿ, ‘1980ರ ದಶಕದಲ್ಲಿ ನನ್ನನ್ನು ಪತ್ರಕರ್ತನನ್ನಾಗಿ ಮಾಡುವಲ್ಲಿ ಮದನಮೋಹನ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಪತ್ರಿಕೋದ್ಯಮದ ಬಹುತೇಕ ಎಲ್ಲ ಅಂಶಗಳ ಬಗ್ಗೆ ಜ್ಞಾನ ಹೊಂದಿದ್ದರು’ ಎಂದರು.</p>.<p>ಮದನಮೋಹನ ಅವರ ನಿಕಟವರ್ತಿ ಎಸ್.ಎಸ್.ಹಿರೇಮಠ ಮಾತನಾಡಿ, ‘ಮದನಮೋಹನ ಅವರು ಪರಿಪೂರ್ಣ ಪತ್ರಕರ್ತರಾಗಿದ್ದರು’ ಎಂದು ಹೇಳಿದರು.</p>.<p>ಪತ್ರಿಕೋದ್ಯಮ ವಿಭಾಗದ ಚೇರ್ಪರ್ಸನ್ ಸುನೀತಾ ಪಾಟೀಲ, ಪತ್ರಕರ್ತ ಪ್ರವೀಣ್ ಪಾರಾ ಉಪಸ್ಥಿತರಿದ್ದರು.</p>.ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ನಿಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಹುಬ್ಬಳ್ಳಿಯಲ್ಲಿ ಶನಿವಾರ ನಿಧನರಾದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನಮೋಹನ ಅವರಿಗೆ ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಹಿರಿಯ ಪತ್ರಕರ್ತ ಶ್ರೀಕಾಂತಾಚಾರಿ ಮಣ್ಣೂರ್ ಮಾತನಾಡಿ, ‘ಮದನಮೋಹನ ಅವರ ನಿಧನದಿಂದ ಪತ್ರಿಕೋದ್ಯಮ ಜಗತ್ತು ಒಬ್ಬ ಸ್ಪಷ್ಟ ಮತ್ತು ಪ್ರಾಮಾಣಿಕ ಪತ್ರಕರ್ತನನ್ನು ಕಳೆದುಕೊಂಡಿದೆ. ತಾವು ಬೆಳೆಯುವುದಲ್ಲದೇ ಹಲವು ಪತ್ರಕರ್ತರನ್ನು ಬೆಳೆಸಿದರು’ ಎಂದು ಹೇಳಿದರು.</p>.<p>ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಮಾತನಾಡಿ, ‘1980ರ ದಶಕದಲ್ಲಿ ನನ್ನನ್ನು ಪತ್ರಕರ್ತನನ್ನಾಗಿ ಮಾಡುವಲ್ಲಿ ಮದನಮೋಹನ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಪತ್ರಿಕೋದ್ಯಮದ ಬಹುತೇಕ ಎಲ್ಲ ಅಂಶಗಳ ಬಗ್ಗೆ ಜ್ಞಾನ ಹೊಂದಿದ್ದರು’ ಎಂದರು.</p>.<p>ಮದನಮೋಹನ ಅವರ ನಿಕಟವರ್ತಿ ಎಸ್.ಎಸ್.ಹಿರೇಮಠ ಮಾತನಾಡಿ, ‘ಮದನಮೋಹನ ಅವರು ಪರಿಪೂರ್ಣ ಪತ್ರಕರ್ತರಾಗಿದ್ದರು’ ಎಂದು ಹೇಳಿದರು.</p>.<p>ಪತ್ರಿಕೋದ್ಯಮ ವಿಭಾಗದ ಚೇರ್ಪರ್ಸನ್ ಸುನೀತಾ ಪಾಟೀಲ, ಪತ್ರಕರ್ತ ಪ್ರವೀಣ್ ಪಾರಾ ಉಪಸ್ಥಿತರಿದ್ದರು.</p>.ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ನಿಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>