ದೇವಪ್ಪನ ಚಿಕ್ಕಪ್ಪನಾದ ಚಂದ್ರಕಾಂತ ತನ್ನ ಸಂಬಂಧಿ ಮಲ್ಲೇಶಪ್ಪನ ಮನೆಗೆ ಬಂದು ಹೋಗುತ್ತಿದ್ದ. ಇದನ್ನು ಸಹಿಸದ ದೇವಪ್ಪ ಈ ಬಗ್ಗೆ ತಕರಾರು ಎತ್ತಿದ್ದ. ಆ ಸಂದರ್ಭದಲ್ಲಿದ್ದ ಶಿವಲಿಂಗಪ್ಪ ಪೊಲೀಸ್ ಪಾಟೀಲ ಹಾಗೂ ಮೃತ ಸಂಗಣ್ಣ ಪೊಲೀಸ್ ಪಾಟೀಲ ಅವರು ಮಲ್ಲೇಶಪ್ಪನ ಪರ ವಹಿಸಿಕೊಂಡು ದೇವಪ್ಪನಿಗೆ ಬುದ್ಧಿ ಹೇಳಿದ್ದರು. ಇದರಿಂದ ಕೆರಳಿದ ದೇವಪ್ಪ ತನ್ನ ಸ್ನೇಹಿತನಾದ ಮಲ್ಲಿಕಾರ್ಜುನ ಹಡಪದನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸಂಗಣ್ಣ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.