ಚಿಂಚೋಳಿ ತಾಲ್ಲೂಕಿನ ಯಲಮಾಮಡಿ ಪುನರ್ವಸತಿ ಕೇಂದ್ರದ ನಿವಾಸಿ ಶಾಮರಾವ ದೊಡ್ಮನಿ (65) ಮತ್ತು ಯಲಮಾಮಡಿ ಮೋನು ನಾಯಕ ತಾಂಡಾದ ಮೋತಿಬಾಯಿ (55) ಮೃತಪಟ್ಟಿದ್ದಾರೆ. ಶಾಮರಾವ್ ಸ್ಥಳದಲ್ಲಿಯೇ ಅಸುನೀಗಿದರೆ, ಮೋತಿಬಾಯಿ ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇತರ 10 ಮಂದಿ ಗಾಯಗೊಂಡಿದ್ದು, ಇವರಲ್ಲಿ ಶಂಕರ ಹಾಗೂ ಇನ್ನೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.