ರಾಣೇಶಫಿರ್ ದರ್ಗಾ ನಿವಾಸಿ, ಎಸ್ಬಿಆರ್ ಕಾಲೇಜಿನ ವಿದ್ಯಾರ್ಥಿ ವೀರೇಶ ಶರಣಬಸಪ್ಪ ಕಡಗಂಚಿ (21) ಕೊಲೆಯದವರು. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ವೀರೇಶಗೆ ಬಲವಾಗಿ ಚಾಕುವಿನಿಂದ ಇರಿದಿದ್ದಾರೆ. ಎಷ್ಟೋ ಹೊತ್ತು ರಕ್ತದ ಮಡುವಿನಲ್ಲೇ ಬಿದ್ದಿದ್ದ ವೀರೇಶಗೆ ಸಾರ್ವಜನಿಕರು ನೀರು ಕುಡಿಸಲು ಯತ್ನಿಸಿ, ಆಂಬುಲೆನ್ಸ್ಗೆ ಕರೆ ಮಾಡಿ ಮಾಹಿತಿ ನೀಡಿದರು.