ಈ ವೈದ್ಯರ ಕರ್ತವ್ಯ ಲೋಪ ಕುರಿತು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಹ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಗಮನಕ್ಕೆ ತಂದಿದ್ದರು. ಸೋಮಣ್ಣ ಅವರೂ, ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ರಂಜನ್ ಮತ್ತೆ ಆರೋಗ್ಯ ಸಚಿವರ ಗಮನಕ್ಕೆ ತಂದಾಗ ಅಲ್ಲೇ ಅಮಾನತಿಗೆ ಆದೇಶ ನೀಡಿದ್ದಾರೆ.
ಬಳಿಕ ರಾಮುಲು ಮಾತನಾಡಿ, ‘ಆ ವೈದ್ಯನ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಯಾರೇ ಕರ್ತವ್ಯ ಲೋಪ ಎಸಗಿದರೂ, ಅಮಾನತು ಮಾಡಲಾಗುವುದು. ಅದರ ಅರ್ಥ ಬೆದರಿಕೆ ಅಲ್ಲ. ಸುಧಾರಣೆ ಆಗಬೇಕು ಅಷ್ಟೇ’ ಎಂದು ಸಚಿವರು ಹೇಳಿದರು.
ಪ್ರತ್ಯೇಕತೆಯಿಂದ ಸಮಸ್ಯೆ: ಮಡಿಕಲ್ ಕಾಲೇಜು ಹಾಗೂ ಆರೋಗ್ಯ ಇಲಾಖೆ ಪ್ರತ್ಯೇಕಗೊಂಡ ನಂತರ ಸಮನ್ವಯತೆ ಕೊರತೆಯಿಂದ ಸಮಸ್ಯೆಗಳು ಸೃಷ್ಟಿಯಾಗಿದೆ. ಯಾವುದೇ ಸರ್ಕಾರ ಬರಲಿ; ಎರಡು ಇಲಾಖೆಗಳೂ ಒಂದೇ ಸೂರಿನಡಿ ಕೆಲಸ ಮಾಡಿದರೆ ಸಮಸ್ಯೆ ಸ್ವಲ್ಪಮಟ್ಟಿಗೆ ನೀಗಲಿದೆ. ಆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.