<p><strong>ಮಡಿಕೇರಿ</strong>: ಇಲ್ಲಿನ ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಂದ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ಶುಲ್ಕ ವಸೂಲು ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಇಲ್ಲಿಗೆ ಬಂದ ಜಲಪಾತ ಇರುವ ತೋಟದ ಮಾಲೀಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಹಣ ಸಂಗ್ರಹಿಸುವುದು ಬೇಡ. ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಿ ಎಂದು ಒತ್ತಾಯಿಸಿದರು.</p>.<p>ಮಾಲೀಕರಾದ ಪಾರ್ವತಿ ನಾಣಯ್ಯ ಅವರ ಪುತ್ರಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ, ‘ಈ ಹಿಂದೆ ಇದ್ದಂತೆ ಉಚಿತ ಪ್ರವೇಶ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆ.ನಿಡುಗಣಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸೆಲ್ವಿನ್ ಜಯಕುಮಾರ್, ‘ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕಳೆದ 6 ತಿಂಗಳುಗಳಿಂದ ₹ 10 ಪ್ರವೇಶಶುಲ್ಕ ಪಡೆದು ಅಬ್ಬಿ ಜಲಪಾತದ ನಿರ್ವಹಣೆ ಮಾಡಲಾಗುತ್ತಿದೆ. ಅಬ್ಬಿ ಜಲಪಾತಕ್ಕೆ ಹೋಗುವ ದಾರಿ ಇರುವ ತೋಟದ ಮಾಲೀಕರು ಪ್ರವಾಸಿಗರಿಂದ ಪ್ರವೇಶಶುಲ್ಕ ವಸೂಲು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ ಪ್ರತಿಕ್ರಿಯಿಸಿ, ‘ಪಂಚಾಯಿತಿ ವತಿಯಿಂದ ₹ 15 ಲಕ್ಷದಷ್ಟು ಅಭಿವೃದ್ಧಿ ಕಾರ್ಯಗಳನ್ನು ಅಬ್ಬಿ ಜಲಪಾತದಲ್ಲಿ ಮಾಡಲಾಗಿದೆ. ಅದರ ನಿರ್ವಹಣಾ ವೆಚ್ಚವಾಗಿ ಅತ್ಯಲ್ಪ ಪ್ರವೇಶಶುಲ್ಕವನ್ನು ಅಧಿಕೃತವಾಗಿಯೆ ಪಡೆಯಲಾಗುತ್ತಿದೆ. ಆದರೆ, ತೋಟದ ಮಾಲೀಕರು ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದರು.</p>.<p>ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರೂ ಆಗಿರುವ ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಪ್ರತಿಕ್ರಿಯಿಸಿ, ‘ಈ ಕುರಿತು ತೋಟದ ಮಾಲೀಕರು ಹಾಗೂ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ಅವರೊಂದಿಗೆ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಇಲ್ಲಿನ ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಂದ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ಶುಲ್ಕ ವಸೂಲು ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಇಲ್ಲಿಗೆ ಬಂದ ಜಲಪಾತ ಇರುವ ತೋಟದ ಮಾಲೀಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಹಣ ಸಂಗ್ರಹಿಸುವುದು ಬೇಡ. ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಿ ಎಂದು ಒತ್ತಾಯಿಸಿದರು.</p>.<p>ಮಾಲೀಕರಾದ ಪಾರ್ವತಿ ನಾಣಯ್ಯ ಅವರ ಪುತ್ರಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ, ‘ಈ ಹಿಂದೆ ಇದ್ದಂತೆ ಉಚಿತ ಪ್ರವೇಶ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆ.ನಿಡುಗಣಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸೆಲ್ವಿನ್ ಜಯಕುಮಾರ್, ‘ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕಳೆದ 6 ತಿಂಗಳುಗಳಿಂದ ₹ 10 ಪ್ರವೇಶಶುಲ್ಕ ಪಡೆದು ಅಬ್ಬಿ ಜಲಪಾತದ ನಿರ್ವಹಣೆ ಮಾಡಲಾಗುತ್ತಿದೆ. ಅಬ್ಬಿ ಜಲಪಾತಕ್ಕೆ ಹೋಗುವ ದಾರಿ ಇರುವ ತೋಟದ ಮಾಲೀಕರು ಪ್ರವಾಸಿಗರಿಂದ ಪ್ರವೇಶಶುಲ್ಕ ವಸೂಲು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ ಪ್ರತಿಕ್ರಿಯಿಸಿ, ‘ಪಂಚಾಯಿತಿ ವತಿಯಿಂದ ₹ 15 ಲಕ್ಷದಷ್ಟು ಅಭಿವೃದ್ಧಿ ಕಾರ್ಯಗಳನ್ನು ಅಬ್ಬಿ ಜಲಪಾತದಲ್ಲಿ ಮಾಡಲಾಗಿದೆ. ಅದರ ನಿರ್ವಹಣಾ ವೆಚ್ಚವಾಗಿ ಅತ್ಯಲ್ಪ ಪ್ರವೇಶಶುಲ್ಕವನ್ನು ಅಧಿಕೃತವಾಗಿಯೆ ಪಡೆಯಲಾಗುತ್ತಿದೆ. ಆದರೆ, ತೋಟದ ಮಾಲೀಕರು ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದರು.</p>.<p>ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರೂ ಆಗಿರುವ ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಪ್ರತಿಕ್ರಿಯಿಸಿ, ‘ಈ ಕುರಿತು ತೋಟದ ಮಾಲೀಕರು ಹಾಗೂ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ಅವರೊಂದಿಗೆ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>