ಇದಕ್ಕೂ ಮೊದಲು ಹಾರಂಗಿ ಜಲಾಶಯದ ಆವರಣದಲ್ಲಿ ರಿಕ್ಟರ್ ಮಾಪನವಿತ್ತು. ಆದರೆ, ಜುಲೈನಲ್ಲಿ ಜಿಲ್ಲೆಯ ಕೆಲವು ಭಾಗದ ಜನರಿಗೆ ಭೂಕಂಪನದ ಅನುಭವವಾಗಿದ್ದರೂ ಹಾರಂಗಿಯಲ್ಲಿ ಯಾವುದೇ ತೀವ್ರತೆ ದಾಖಲಾಗಿರಲಿಲ್ಲ. ಬಳಿಕ ಆಗಸ್ಟ್ನಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿ ಜೀವಹಾನಿ, ಮನೆ, ತೋಟಗಳು ನಾಶವಾಗಿದ್ದವು.