ಮಡಿಕೇರಿ: ಕೇರಳದ ವಯನಾಡಿನಲ್ಲಿ ಆಫ್ರಿಕನ್ಹಂದಿಜ್ವರದ ಪ್ರಕರಣಗಳು ಕಂಡು ಬಂದಿರು ವುದರಿಂದ ತಾತ್ಕಾಲಿಕವಾಗಿ ಹಂದಿ ಹಾಗೂ ಹಂದಿ ಮಾಂಸ ಖರೀದಿಯನ್ನು ನಿಲ್ಲಿಸಲಾಗಿದೆ.
‘ಜಿಲ್ಲೆಯ ಗಡಿಭಾಗದ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಂದಿಗಳು ಅಸ್ವಾಭಾವಿಕವಾಗಿ ಮೃತಪಟ್ಟರೆ ಕೂಡಲೇ ಸಮೀಪದ ಪಶು ವೈದ್ಯಕೀಯ ಆಸ್ಪತ್ರೆಗೆ ಮಾಹಿತಿ ನೀಡಬೇಕು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಸುರೇಶ ಭಟ್ ಮನವಿ ಮಾಡಿದ್ದಾರೆ.