ಅಭಿಮನ್ಯು ಆನೆಯ ಮಾವುತ ವಸಂತ, ಕಾವಾಡಿ ರಾಜು, ವರಲಕ್ಷ್ಮಿ ಆನೆಯ ಮಾವುತ ರವಿ, ಕಾವಾಡಿ ಮಾದೇಶ ಆನೆಯೊಂದಿಗೆ ತೆರಳಿದರು. ಅಭಿಮನ್ಯು ಆನೆ ಕಳೆದ 10 ವರ್ಷಗಳಿಂದ ದಸರಾ ಉತ್ಸವಕ್ಕೆ ತೆರಳುತ್ತಿದ್ದರೆ, ವರಲಕ್ಷ್ಮಿ ಆನೆ 6 ವರ್ಷಗಳಿಂದ ತೆರಳುತ್ತಿದೆ. ಮತ್ತಿಗೋಡು ಶಿಬಿರದಿಂದ ಹೊರಟ ಆನೆಗಳು ವೀರನಹೊಸಳ್ಳಿಯಿಂದ ಹೊರಡುವ ಗಜಪಯಣದಲ್ಲಿ ಇತರ ಆನೆಗಳೊಂದಿಗೆ ಕೂಡಿಕೊಳ್ಳಲಿವೆ.