<p><strong>ಮಡಿಕೇರಿ:</strong> ಇಲ್ಲಿಗೆ ಸಮೀಪದ ಮಾಂದಲ್ಪಟ್ಟಿಯಲ್ಲಿ ದುಬಾರಿ ದರ ಪಡೆಯುವುದು, ಪ್ರವಾಸಿಗರೊಂದಿಗೆ ಅನುಚಿತ ವರ್ತನೆ, ಅತಿ ವೇಗ, ನಿರ್ಲಕ್ಷ್ಯತನದ ಚಾಲನೆ ಕಂಡು ಬಂದಲ್ಲಿ ಶಿಸ್ತು ಕ್ರಮ ನಿಶ್ಚಿತ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಜೀಪ್ ಚಾಲಕರಿಗೆ ಎಚ್ಚರಿಕೆ ನೀಡಿದರು.</p>.<p>ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಜೀಪು ಮಾಲೀಕರು ಮತ್ತು ಚಾಲಕರ ಸಭೆ ನಡೆಸಿದ ಅವರು ಹಲವು ಸೂಚನೆಗಳನ್ನು ನೀಡಿದರು.</p>.<p>ಇನ್ನು ಮುಂದೆ ಮಾಂದಲ್ಪಟ್ಟಿಗೆ ತೆರಳುವ ಜೀಪುಗಳನ್ನು ನಿರಂತರ ತಪಾಸಣೆ ಮಾಡಲಾಗುವುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪೊಲೀಸ್ ಇಲಾಖೆಯಿಂದ ಕ್ರಮ ಸಂಖ್ಯೆ ಒಳಗೊಂಡ ಸ್ಟಿಕ್ಕರ್ ನೀಡಲಾಗುವುದು. ಅದನ್ನು ಹಾಕಿರುವ ಜೀಪುಗಳು ತಪಾಸಣೆಗೊಳಪಟ್ಟಿದೆ ಎಂದು ಗುರುತಿಸಬಹುದು ಎಂದು ತಿಳಿಸಿದರು.</p>.<p>ಜೀಪುಗಳು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕಡಿದಾದ ಮಾರ್ಗದಲ್ಲಿ ಅತಿ ವೇಗದಿಂದ ಅಪಘಾತಗಳು ಸಂಭವಿಸುವ ಅಪಾಯವಿದೆ. ಹಾಗಾಗಿ ಅತಿ ವೇಗದ, ಅಜಾಗರೂಕತೆಯ ಚಾಲನೆ ಮಾಡುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಪ್ರವಾಸಿಗರೊಂದಿಗೆ ಎಲ್ಲ ಚಾಲಕರೂ ಸೌಜನ್ಯದಿಂದ ವರ್ತಿಸಬೇಕು. ಹೆಚ್ಚಿನ ಚಾಲಕರು ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಆದರೆ, ಕೆಲವೊಬ್ಬರು ಮಾಡುವ ತಪ್ಪಿನಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ ಇಟ್ಟಂತಾಗುತ್ತದೆ. ಹಾಗಾಗಿ, ಎಲ್ಲ ಚಾಲಕರೂ ನಿಯಮಬದ್ಧವಾಗಿರಬೇಕು, ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.</p>.<p>ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಮಾತನಾಡಿ, ‘ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ಪ್ರಕರಣ ದಾಖಲಿಸಲಾಗುವುದು. ಯಾವುದೇ ಅರ್ಜಿ ಸಲ್ಲಿಸಿದರೂ ಶೀಘ್ರವಾಗಿ ಕೆಲಸ ಮಾಡಿಕೊಡಲಾಗುವುದು. ಸಮಸ್ಯೆಗಳಾದಲ್ಲಿ ನೇರವಾಗಿ ನನ್ನನ್ನೇ ಭೇಟಿ ಮಾಡಬಹುದು’ ಎಂದರು.</p>.<p>ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ ಉನ್ನಿಕೃಷ್ಣಂ ಮಾತನಾಡಿ, ‘ಮಾಂದಲ್ಪಟ್ಟಿಗೆ ₹ 2,500 ದರ ಮಾತ್ರವೇ ತೆಗೆದುಕೊಳ್ಳಬೇಕು, ನೋಡಲು ಪ್ರವಾಸಿಗರಿಗೆ ಒಂದು ಗಂಟೆ ಕಾಲ ಅವಕಾಶ ಕೊಡಬೇಕು. ಅತಿ ವೇಗದ ಚಾಲನೆ ಮಾಡಬಾರದು ಎಂದು ಚಾಲಕರಿಗೆ ಹೇಳುತ್ತೇವೆ’ ಎಂದು ಹೇಳಿದರು.</p>.<p>ಡಿವೈಎಸ್ಪಿಗಳಾ ಸೂರಜ್, ಮೇದಪ್ಪ, ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ ಉನ್ನಿಕೃಷ್ಣಂ, ತೆಕ್ಕಡ ಕಾಶಿ ಕಾವೇರಪ್ಪ, ಪ್ರೀತಂ ರೈ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಇಲ್ಲಿಗೆ ಸಮೀಪದ ಮಾಂದಲ್ಪಟ್ಟಿಯಲ್ಲಿ ದುಬಾರಿ ದರ ಪಡೆಯುವುದು, ಪ್ರವಾಸಿಗರೊಂದಿಗೆ ಅನುಚಿತ ವರ್ತನೆ, ಅತಿ ವೇಗ, ನಿರ್ಲಕ್ಷ್ಯತನದ ಚಾಲನೆ ಕಂಡು ಬಂದಲ್ಲಿ ಶಿಸ್ತು ಕ್ರಮ ನಿಶ್ಚಿತ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಜೀಪ್ ಚಾಲಕರಿಗೆ ಎಚ್ಚರಿಕೆ ನೀಡಿದರು.</p>.<p>ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಜೀಪು ಮಾಲೀಕರು ಮತ್ತು ಚಾಲಕರ ಸಭೆ ನಡೆಸಿದ ಅವರು ಹಲವು ಸೂಚನೆಗಳನ್ನು ನೀಡಿದರು.</p>.<p>ಇನ್ನು ಮುಂದೆ ಮಾಂದಲ್ಪಟ್ಟಿಗೆ ತೆರಳುವ ಜೀಪುಗಳನ್ನು ನಿರಂತರ ತಪಾಸಣೆ ಮಾಡಲಾಗುವುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪೊಲೀಸ್ ಇಲಾಖೆಯಿಂದ ಕ್ರಮ ಸಂಖ್ಯೆ ಒಳಗೊಂಡ ಸ್ಟಿಕ್ಕರ್ ನೀಡಲಾಗುವುದು. ಅದನ್ನು ಹಾಕಿರುವ ಜೀಪುಗಳು ತಪಾಸಣೆಗೊಳಪಟ್ಟಿದೆ ಎಂದು ಗುರುತಿಸಬಹುದು ಎಂದು ತಿಳಿಸಿದರು.</p>.<p>ಜೀಪುಗಳು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕಡಿದಾದ ಮಾರ್ಗದಲ್ಲಿ ಅತಿ ವೇಗದಿಂದ ಅಪಘಾತಗಳು ಸಂಭವಿಸುವ ಅಪಾಯವಿದೆ. ಹಾಗಾಗಿ ಅತಿ ವೇಗದ, ಅಜಾಗರೂಕತೆಯ ಚಾಲನೆ ಮಾಡುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಪ್ರವಾಸಿಗರೊಂದಿಗೆ ಎಲ್ಲ ಚಾಲಕರೂ ಸೌಜನ್ಯದಿಂದ ವರ್ತಿಸಬೇಕು. ಹೆಚ್ಚಿನ ಚಾಲಕರು ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಆದರೆ, ಕೆಲವೊಬ್ಬರು ಮಾಡುವ ತಪ್ಪಿನಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ ಇಟ್ಟಂತಾಗುತ್ತದೆ. ಹಾಗಾಗಿ, ಎಲ್ಲ ಚಾಲಕರೂ ನಿಯಮಬದ್ಧವಾಗಿರಬೇಕು, ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.</p>.<p>ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಮಾತನಾಡಿ, ‘ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ಪ್ರಕರಣ ದಾಖಲಿಸಲಾಗುವುದು. ಯಾವುದೇ ಅರ್ಜಿ ಸಲ್ಲಿಸಿದರೂ ಶೀಘ್ರವಾಗಿ ಕೆಲಸ ಮಾಡಿಕೊಡಲಾಗುವುದು. ಸಮಸ್ಯೆಗಳಾದಲ್ಲಿ ನೇರವಾಗಿ ನನ್ನನ್ನೇ ಭೇಟಿ ಮಾಡಬಹುದು’ ಎಂದರು.</p>.<p>ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ ಉನ್ನಿಕೃಷ್ಣಂ ಮಾತನಾಡಿ, ‘ಮಾಂದಲ್ಪಟ್ಟಿಗೆ ₹ 2,500 ದರ ಮಾತ್ರವೇ ತೆಗೆದುಕೊಳ್ಳಬೇಕು, ನೋಡಲು ಪ್ರವಾಸಿಗರಿಗೆ ಒಂದು ಗಂಟೆ ಕಾಲ ಅವಕಾಶ ಕೊಡಬೇಕು. ಅತಿ ವೇಗದ ಚಾಲನೆ ಮಾಡಬಾರದು ಎಂದು ಚಾಲಕರಿಗೆ ಹೇಳುತ್ತೇವೆ’ ಎಂದು ಹೇಳಿದರು.</p>.<p>ಡಿವೈಎಸ್ಪಿಗಳಾ ಸೂರಜ್, ಮೇದಪ್ಪ, ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ ಉನ್ನಿಕೃಷ್ಣಂ, ತೆಕ್ಕಡ ಕಾಶಿ ಕಾವೇರಪ್ಪ, ಪ್ರೀತಂ ರೈ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>