ಪಡುವಣದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಜಂಬೂಸವಾರಿ ಮುಗಿಸಿ ಮೈಸೂರಿನಿಂದ ಬಂದ ಅಪಾರ ಜನಸ್ತೋಮ ಬೀದಿಬೀದಿಗಳಲ್ಲಿ ಕಂಡು ಬಂದರು. ಕಿವಿಗಡಚಿಕ್ಕುವ ಡಿ.ಜೆ ಸಂಗೀತದ ಅಬ್ಬರಕ್ಕೆ ಯುವಜನರು ಕುಣಿದು ಕುಪ್ಪಳಿಸಿದರು. 150 ವರ್ಷಗಳಿಗೂ ಮೀರಿದ ಇತಿಹಾಸ ಹೊಂದಿರುವ ನಗರದ ಪೇಟೆ ಶ್ರೀರಾಮ ಮಂದಿರ ಸಮಿತಿಯ ‘ಶಿವದರ್ಶನ’ ಮಂಟಪ ಮುಂದಡಿ ಇಡುತ್ತಿದ್ದಂತೆ ಶೋಭಾ ಯಾತ್ರೆ ಆರಂಭ ಗೊಂಡಿತು.