<p><strong>ಮಡಿಕೇರಿ</strong>: ಇಲ್ಲಿನ ನಗರಸಭೆಯ ಬಜೆಟ್ನ ಪೂರ್ವಭಾವಿ ಸಭೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಒಬ್ಬರನ್ನು ಬಿಟ್ಟರೆ ಬೇರೆ ಸಾರ್ವಜನಿಕರು ಇರಲಿಲ್ಲ. ನಗರಸಭೆಯ ಸಿಬ್ಬಂದಿಯೇ ಸಭಿಕರಾಗಿ ಕುಳಿತಿದ್ದರು.</p>.<p>ಈ ದೃಶ್ಯಗಳು ಇಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಗರಸಭೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಕಂಡು ಬಂತು.</p>.<p>ನಗರದಲ್ಲಿರುವ ಎಲ್ಲ ಸಂಘ, ಸಂಸ್ಥೆಗಳು, ಸಂಘಟನೆಗಳು ಈ ಸಭೆಯಿಂದ ಸಾಮೂಹಿಕವಾಗಿ ದೂರ ಉಳಿದಿದ್ದವು. ನಗರಸಭೆಯ ಮಾಜಿ ಸದಸ್ಯರು ಸಹ ಅಂತರ ಕಾಯ್ದುಕೊಂಡಿದ್ದರು. ಕೆಲವೇ ಕೆಲವು ಹಾಲಿ ಸದಸ್ಯರು ಹಾಜರಾಗಿದ್ದರು. ಹೆಚ್ಚಿನವರು ಗೈರಾಗಿದ್ದರು.</p>.<p>ಸಭೆಗೆ ಬಂದಿದ್ದ ಹಿರಿಯ ಮುಖಂಡರಾದ ಬೈ ಶ್ರೀ ಪ್ರಕಾಶ್ ಅವರು, ನಗರದಲ್ಲಿ ನಡೆದಿರುವ ಅಮೃತ್–2 ಯೋಜನೆಯಿಂದ ನಾಗರಿಕರಿಗೆ ಆಗಿರುವ ತೊಂದರೆಗಳನ್ನು ಕುರಿತು ಸಭೆಯ ಗಮನಕ್ಕೆ ತಂದರು.</p>.<p>ಈ ಕಾವೇರಿ ಕಲಾಕ್ಷೇತ್ರವನ್ನು ಒಡೆಯುವ ಬದಲು ದುರಸ್ತಿ, ನವೀಕರಣ ಮಾಡಿ ಎಂದು ಸಲಹೆ ನೀಡಿದರು. ಜೊತೆಗೆ, ಫಾರಂ–3 ಸರಳೀಕರಣ ಮಾಡಿ ಎಂದು ಮನವಿ ಮಾಡಿದರು.</p>.<p>ನಗರಸಭೆಯ ಅಧ್ಯಕ್ಷೆ ಕಲಾವತಿ, ಪೌರಾಯುಕ್ತ ರಮೇಶ್ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭೆಯ ಕೆಲವು ಸದಸ್ಯರು ಸಭೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಇಲ್ಲಿನ ನಗರಸಭೆಯ ಬಜೆಟ್ನ ಪೂರ್ವಭಾವಿ ಸಭೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಒಬ್ಬರನ್ನು ಬಿಟ್ಟರೆ ಬೇರೆ ಸಾರ್ವಜನಿಕರು ಇರಲಿಲ್ಲ. ನಗರಸಭೆಯ ಸಿಬ್ಬಂದಿಯೇ ಸಭಿಕರಾಗಿ ಕುಳಿತಿದ್ದರು.</p>.<p>ಈ ದೃಶ್ಯಗಳು ಇಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಗರಸಭೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಕಂಡು ಬಂತು.</p>.<p>ನಗರದಲ್ಲಿರುವ ಎಲ್ಲ ಸಂಘ, ಸಂಸ್ಥೆಗಳು, ಸಂಘಟನೆಗಳು ಈ ಸಭೆಯಿಂದ ಸಾಮೂಹಿಕವಾಗಿ ದೂರ ಉಳಿದಿದ್ದವು. ನಗರಸಭೆಯ ಮಾಜಿ ಸದಸ್ಯರು ಸಹ ಅಂತರ ಕಾಯ್ದುಕೊಂಡಿದ್ದರು. ಕೆಲವೇ ಕೆಲವು ಹಾಲಿ ಸದಸ್ಯರು ಹಾಜರಾಗಿದ್ದರು. ಹೆಚ್ಚಿನವರು ಗೈರಾಗಿದ್ದರು.</p>.<p>ಸಭೆಗೆ ಬಂದಿದ್ದ ಹಿರಿಯ ಮುಖಂಡರಾದ ಬೈ ಶ್ರೀ ಪ್ರಕಾಶ್ ಅವರು, ನಗರದಲ್ಲಿ ನಡೆದಿರುವ ಅಮೃತ್–2 ಯೋಜನೆಯಿಂದ ನಾಗರಿಕರಿಗೆ ಆಗಿರುವ ತೊಂದರೆಗಳನ್ನು ಕುರಿತು ಸಭೆಯ ಗಮನಕ್ಕೆ ತಂದರು.</p>.<p>ಈ ಕಾವೇರಿ ಕಲಾಕ್ಷೇತ್ರವನ್ನು ಒಡೆಯುವ ಬದಲು ದುರಸ್ತಿ, ನವೀಕರಣ ಮಾಡಿ ಎಂದು ಸಲಹೆ ನೀಡಿದರು. ಜೊತೆಗೆ, ಫಾರಂ–3 ಸರಳೀಕರಣ ಮಾಡಿ ಎಂದು ಮನವಿ ಮಾಡಿದರು.</p>.<p>ನಗರಸಭೆಯ ಅಧ್ಯಕ್ಷೆ ಕಲಾವತಿ, ಪೌರಾಯುಕ್ತ ರಮೇಶ್ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭೆಯ ಕೆಲವು ಸದಸ್ಯರು ಸಭೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>