ಮಡಿಕೇರಿ: ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಆವರಣದಲ್ಲಿ ಈಚೆಗೆ ‘ಪುತ್ತರಿ ಹಬ್ಬ’ದ ಸಂತೋಷಕೂಟ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಚತುಷ್ಪಥ ರಸ್ತೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದ ಚರ್ಚಾ ಸ್ಪರ್ಧೆ, ಬಾಲ್ಯದ ದಿನಗಳ ಮೆಲುಕು, ಕಿರು ನಾಟಕ ಪ್ರದರ್ಶನ, ನೃತ್ಯ, ಹಾಡು, ಆಕರ್ಷಕ ಹೂವು ಜೋಡಣೆ ಹಾಗೂ ಫ್ಯಾಷನ್ ಷೋಗಳು ನಡೆದವು.