<p><strong>ವಿರಾಜಪೇಟೆ: </strong>ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸಂಸ್ಥೆಯೊಂದಕ್ಕೆ ಸೇರಿದ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ದೂರಿನ ಮೇರೆಗೆ ವಿಚಕ್ಷಣಾ ದಳ ಮಳಿಗೆಯನ್ನು ಮುಚ್ಚಿಸಿ ಮಾಂಸ ಮಾರಾಟ ಮಾಡದಂತೆ ಷರತ್ತು ವಿಧಿಸಿದೆ.</p>.<p>ಕೆಲ ದಿನಗಳ ಹಿಂದೆ ಇದೇ ಮಳಿಗೆಯಲ್ಲಿ ಕೋಳಿ ಮಾಂಸವನ್ನು ಕೆ.ಜಿ. ಯೊಂದಕ್ಕೆ ₹ 220 ರಂತೆ ಮಾರಾಟ ಮಾಡುತ್ತಿದ್ದುದರ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶುಕ್ರವಾರವೂ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿಚಕ್ಷಣಾದಳ ಮಳಿಗೆ ಬಂದ್ ಮಾಡಿಸಿದೆ.</p>.<p>ಅದೇ ರಸ್ತೆಯಲ್ಲಿನ ಮತ್ತೊಂದು ಸಂಸ್ಥೆಗೆ ಸೇರಿದ ಕೋಳಿ ಮಾಂಸ ಮಾರಾಟ ಮಳಿಗೆಗೂ ದುಬಾರಿ ದರದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇದಲ್ಲದೆ ಪಟ್ಟಣದಲ್ಲಿ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ವರ್ತಕರಿಗೆ ತಲಾ ₹ 1 ಸಾವಿರ ದಂಡ ವಿಧಿಸಲಾಗಿದೆ.</p>.<p>ಕೋಳಿ ಮಾಂಸದ ದರ ಏರಿಕೆಯ ಕುರಿತು ಮೇ 12ರಂದು ಪ್ರಜಾವಾಣಿ ‘ಗಗನಕ್ಕೇರಿದ ಕೋಳಿ ಮಾಂಸದ ದರ’ ಎಂಬ ಶೀರ್ಷಿಕೆಯಡಿಯಲ್ಲಿ ಪಟ್ಟಣದಲ್ಲಿ ವಿಶೇಷ ಲೇಖನ ಪ್ರಕಟಿಸಿತ್ತು.</p>.<p class="Subhead"><strong>ನಿಯಮ ಉಲ್ಲಂಘಿಸಿದವರಿಗೆ ದಂಡ: </strong>ಪಟ್ಟಣದ ಖಾಸಗಿ ಸಭಾಂಗಣದಲ್ಲಿ ರಾತ್ರಿ ಮದುವೆ ಆಯೋಜಿಸಿ ಕೋವಿಡ್ ಷರತ್ತು ಉಲ್ಲಂಘಿಸಿದ ಆಯೋಜಕರಿಗೆ ₹ 10 ಸಾವಿರ, ಪಟ್ಟಣದ ರಿಕ್ರಿಯೇಷನ್ ಕ್ಲಬ್ನಲ್ಲಿ ಮದುವೆ ಆಯೋಜಿಸಿದ ಆಯೋಜಕರಿಗೆ ₹ 2 ಸಾವಿರ, ಕೆದಮುಳ್ಳೂರು ಬಳಿಯ ತೋರ ಗ್ರಾಮದಲ್ಲಿ ಮದುವೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಮಂದಿಯನ್ನು ಸೇರಿಸಿದ್ದ ಆಯೋಜಕರಿಗೆ ₹ 3 ಸಾವಿರ, ಷರತ್ತು ಉಲ್ಲಂಘಿಸಿದ ಕೊಡಗು ದಂತ ವೈದ್ಯ ಕಾಲೇಜಿನ ಕ್ಯಾಂಟೀನ್ಗೆ ₹ 5 ಸಾವಿರ, ಪಟ್ಟಣದ ಮೊಗರಗಲ್ಲಿನ ಶಾಮಿಯಾನ ಮಳಿಗೆಯನ್ನು ತೆರೆದಿದ್ದ ಮಳಿಗೆಯೆ ಮಾಲೀಕನಿಗೆ ₹ 1 ಸಾವಿರ ದಂಡ ವಿಧಿಸಲಾಗಿದೆ.</p>.<p>ಪಟ್ಟಣದ ಮತ್ಸ್ಯಭವನದಲ್ಲಿ ಹಾಗೂ ಪ್ರಾವಿಷನ್ ಸ್ಟೋರ್ಸ್ವೊಂದರಲ್ಲಿ ಅಂತರ ಕಾಯ್ದುಕೊಳ್ಳದ ಇಬ್ಬರಿಗೆ ದಂಡ ವಿಧಿಸಲಾಗಿದೆ. ನಿರ್ಬಂಧವನ್ನು ಉಲ್ಲಂಘಿಸಿ ಪಟ್ಟಣದ ನೆಹರೂ ನಗರದಲ್ಲಿ ಅಂಗಡಿ ತೆರೆದಿದ್ದ ಅಂಗಡಿಯ ಮಾಲೀಕರಿಬ್ಬರಿಗೆ ತಲಾ ₹ 2,500 ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.</p>.<p>ಷರತ್ತು ಉಲ್ಲಂಘಿಸಿ ಆರ್ಜಿ ಗ್ರಾಮದ ಹಾಗೂ ಪಟ್ಟಣದಲ್ಲಿನ ತಲಾ ಒಂದೊಂದು ಪ್ರಾರ್ಥನಾ ಮಂದಿರದ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಕೋವಿಡ್-19 ಷರತ್ತು ಉಲ್ಲಂಘಿಸಿ ಮಾಸ್ಕ್ ಧರಿಸದೆ ಸುತ್ತುತ್ತಿದ್ದ 51 ಮಂದಿಗೆ ತಲಾ ₹ 100 ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ವಿಚಕ್ಷಣಾ ದಳವು ಇಲ್ಲಿಯವರೆಗೆ ವಿವಿಧ ರೀತಿಯಿಂದ ಕೋವಿಡ್-19 ಷರತ್ತು ಉಲ್ಲಂಘಿಸಿದವರಿಂದ ಒಟ್ಟು ₹ 33,500 ದಂಡ ವಸೂಲಿ ಮಾಡಿದೆ ಎಂದು ವಿಚಕ್ಷಣಾ ದಳದ ಅಧಿಕಾರಿ ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.</p>.<p>ವಿಚಕ್ಷಣಾ ದಳದ ತಂಡದಲ್ಲಿ ಬಿ.ಎಂ.ನಾಣಯ್ಯ ಹಾಗೂ ಸಮುಚ್ಚಯ ಪೊಲೀಸ್ ಠಾಣೆಯ ಎ.ಎಸ್.ಐ ಮಾದಯ್ಯ ಕರ್ತವ್ಯ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ: </strong>ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸಂಸ್ಥೆಯೊಂದಕ್ಕೆ ಸೇರಿದ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ದೂರಿನ ಮೇರೆಗೆ ವಿಚಕ್ಷಣಾ ದಳ ಮಳಿಗೆಯನ್ನು ಮುಚ್ಚಿಸಿ ಮಾಂಸ ಮಾರಾಟ ಮಾಡದಂತೆ ಷರತ್ತು ವಿಧಿಸಿದೆ.</p>.<p>ಕೆಲ ದಿನಗಳ ಹಿಂದೆ ಇದೇ ಮಳಿಗೆಯಲ್ಲಿ ಕೋಳಿ ಮಾಂಸವನ್ನು ಕೆ.ಜಿ. ಯೊಂದಕ್ಕೆ ₹ 220 ರಂತೆ ಮಾರಾಟ ಮಾಡುತ್ತಿದ್ದುದರ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶುಕ್ರವಾರವೂ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿಚಕ್ಷಣಾದಳ ಮಳಿಗೆ ಬಂದ್ ಮಾಡಿಸಿದೆ.</p>.<p>ಅದೇ ರಸ್ತೆಯಲ್ಲಿನ ಮತ್ತೊಂದು ಸಂಸ್ಥೆಗೆ ಸೇರಿದ ಕೋಳಿ ಮಾಂಸ ಮಾರಾಟ ಮಳಿಗೆಗೂ ದುಬಾರಿ ದರದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇದಲ್ಲದೆ ಪಟ್ಟಣದಲ್ಲಿ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ವರ್ತಕರಿಗೆ ತಲಾ ₹ 1 ಸಾವಿರ ದಂಡ ವಿಧಿಸಲಾಗಿದೆ.</p>.<p>ಕೋಳಿ ಮಾಂಸದ ದರ ಏರಿಕೆಯ ಕುರಿತು ಮೇ 12ರಂದು ಪ್ರಜಾವಾಣಿ ‘ಗಗನಕ್ಕೇರಿದ ಕೋಳಿ ಮಾಂಸದ ದರ’ ಎಂಬ ಶೀರ್ಷಿಕೆಯಡಿಯಲ್ಲಿ ಪಟ್ಟಣದಲ್ಲಿ ವಿಶೇಷ ಲೇಖನ ಪ್ರಕಟಿಸಿತ್ತು.</p>.<p class="Subhead"><strong>ನಿಯಮ ಉಲ್ಲಂಘಿಸಿದವರಿಗೆ ದಂಡ: </strong>ಪಟ್ಟಣದ ಖಾಸಗಿ ಸಭಾಂಗಣದಲ್ಲಿ ರಾತ್ರಿ ಮದುವೆ ಆಯೋಜಿಸಿ ಕೋವಿಡ್ ಷರತ್ತು ಉಲ್ಲಂಘಿಸಿದ ಆಯೋಜಕರಿಗೆ ₹ 10 ಸಾವಿರ, ಪಟ್ಟಣದ ರಿಕ್ರಿಯೇಷನ್ ಕ್ಲಬ್ನಲ್ಲಿ ಮದುವೆ ಆಯೋಜಿಸಿದ ಆಯೋಜಕರಿಗೆ ₹ 2 ಸಾವಿರ, ಕೆದಮುಳ್ಳೂರು ಬಳಿಯ ತೋರ ಗ್ರಾಮದಲ್ಲಿ ಮದುವೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಮಂದಿಯನ್ನು ಸೇರಿಸಿದ್ದ ಆಯೋಜಕರಿಗೆ ₹ 3 ಸಾವಿರ, ಷರತ್ತು ಉಲ್ಲಂಘಿಸಿದ ಕೊಡಗು ದಂತ ವೈದ್ಯ ಕಾಲೇಜಿನ ಕ್ಯಾಂಟೀನ್ಗೆ ₹ 5 ಸಾವಿರ, ಪಟ್ಟಣದ ಮೊಗರಗಲ್ಲಿನ ಶಾಮಿಯಾನ ಮಳಿಗೆಯನ್ನು ತೆರೆದಿದ್ದ ಮಳಿಗೆಯೆ ಮಾಲೀಕನಿಗೆ ₹ 1 ಸಾವಿರ ದಂಡ ವಿಧಿಸಲಾಗಿದೆ.</p>.<p>ಪಟ್ಟಣದ ಮತ್ಸ್ಯಭವನದಲ್ಲಿ ಹಾಗೂ ಪ್ರಾವಿಷನ್ ಸ್ಟೋರ್ಸ್ವೊಂದರಲ್ಲಿ ಅಂತರ ಕಾಯ್ದುಕೊಳ್ಳದ ಇಬ್ಬರಿಗೆ ದಂಡ ವಿಧಿಸಲಾಗಿದೆ. ನಿರ್ಬಂಧವನ್ನು ಉಲ್ಲಂಘಿಸಿ ಪಟ್ಟಣದ ನೆಹರೂ ನಗರದಲ್ಲಿ ಅಂಗಡಿ ತೆರೆದಿದ್ದ ಅಂಗಡಿಯ ಮಾಲೀಕರಿಬ್ಬರಿಗೆ ತಲಾ ₹ 2,500 ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.</p>.<p>ಷರತ್ತು ಉಲ್ಲಂಘಿಸಿ ಆರ್ಜಿ ಗ್ರಾಮದ ಹಾಗೂ ಪಟ್ಟಣದಲ್ಲಿನ ತಲಾ ಒಂದೊಂದು ಪ್ರಾರ್ಥನಾ ಮಂದಿರದ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಕೋವಿಡ್-19 ಷರತ್ತು ಉಲ್ಲಂಘಿಸಿ ಮಾಸ್ಕ್ ಧರಿಸದೆ ಸುತ್ತುತ್ತಿದ್ದ 51 ಮಂದಿಗೆ ತಲಾ ₹ 100 ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ವಿಚಕ್ಷಣಾ ದಳವು ಇಲ್ಲಿಯವರೆಗೆ ವಿವಿಧ ರೀತಿಯಿಂದ ಕೋವಿಡ್-19 ಷರತ್ತು ಉಲ್ಲಂಘಿಸಿದವರಿಂದ ಒಟ್ಟು ₹ 33,500 ದಂಡ ವಸೂಲಿ ಮಾಡಿದೆ ಎಂದು ವಿಚಕ್ಷಣಾ ದಳದ ಅಧಿಕಾರಿ ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.</p>.<p>ವಿಚಕ್ಷಣಾ ದಳದ ತಂಡದಲ್ಲಿ ಬಿ.ಎಂ.ನಾಣಯ್ಯ ಹಾಗೂ ಸಮುಚ್ಚಯ ಪೊಲೀಸ್ ಠಾಣೆಯ ಎ.ಎಸ್.ಐ ಮಾದಯ್ಯ ಕರ್ತವ್ಯ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>