ಮಡಿಕೇರಿ: ಕೊಡಗು ಜಿಲ್ಲೆಯ ಮೂರ್ನಾಡು, ದೊಡ್ಡ ಪುಲಿಕೋಟು, ಸಣ್ಣ ಪುಲಿಕೋಟು, ಹಾಕತ್ತೂರು, ಭೇತ್ರಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಮಳೆ ಸುರಿದು ತಂಪೆರೆಯಿತು.
ನಾಪೋಕ್ಲು ಹೋಬಳಿ ವ್ಯಾಪ್ತಿಯ ಬೇತು, ಕೈಕಾಡು, ಪಾರಾಣೆಯಲ್ಲಿ ಭಾರಿ ಮಳೆಯಾಗಿದೆ. ಸಿಡಿಲಿನ ಆರ್ಭಟ ಜನರನ್ನು ಬೆಚ್ಚಿಬೀಳಿಸಿತು. ಕಟ್ಟೆಮಾಡು ಗ್ರಾಮದಲ್ಲಿ ಹಸುವೊಂದು ಸಿಡಿಲಿಗೆ ಬಲಿಯಾಗಿದೆ.
ಕಾಫಿ ಹಾಗೂ ಕಾಳು ಮೆಣಸಿನ ಬಳ್ಳಿಗಳಿಗೆ ಮಳೆಯ ಅಗತ್ಯವಿತ್ತು. ಈ ಭಾಗದಲ್ಲಿ ಮಂಗಳವಾರ ಸುರಿದ ಮಳೆಯಿಂದ ಬೆಳೆಗಾರರು ಸಂತಸಗೊಂಡಿದ್ದಾರೆ.