‘ಕೊಡಗು ದರ್ಶನ’ ವಿಚಾರಗೋಷ್ಠಿಯಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಕುರಿತು ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ರೈತ, ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬೆಳಿಗ್ಗೆ ಮನೆ ಬಿಟ್ಟು ಹೊರಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲದಂತಾಗಿದೆ. ವಿದೇಶಗಳಲ್ಲಿಯೂ ಬಹಳಷ್ಟು ವನ್ಯ ಜೀವಿಗಳಿವೆ. ಆದರೆ, ಅಲ್ಲಿ ವನ್ಯಜೀವಿಗಳಿಂದ ಯಾವುದೇ ಜೀವ ಹಾನಿಯಾಗುತ್ತಿಲ್ಲ. ಅಲ್ಲಿ ವೈಜ್ಞಾನಿಕವಾಗಿ ಮಾನವ ಮತ್ತು ವನ್ಯಜೀವಿ ಯೋಜನೆ ರೂಪಿಸಿದ್ದಾರೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ಇಂಥ ಯೋಜನೆ ರೂಪಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಬೇಸರ ವ್ಯಕ್ತ ಪಡಿಸಿದರು.