<p><strong>ಶನಿವಾರಸಂತೆ (ಕೊಡಗು ಜಿಲ್ಲೆ):</strong> ಎಡೆಬಿಡದೇ ಸುರಿದ ಮಳೆಯಿಂದಾಗಿ ಕೊಡಗು ಜಿಲ್ಲೆಯ ಹಲವೆಡೆ ಬಸವನ ಹುಳುಗಳ ಕಾಟ ಹೆಚ್ಚಾಗಿದೆ. ದಿನ ಬೆಳಗಾಗುವಷ್ಟರಲ್ಲಿ ಕಾಫಿ ತೋಟದಲ್ಲಿರುವ ಗಿಡಗಳ ಎಲೆಗಳನ್ನು, ಕಾಫಿಯ ಹೀಚುಕಾಯಿಯನ್ನು ತಿಂದು ತೇಗುತ್ತಿದ್ದು, ಅವುಗಳನ್ನು ನಾಶಪಡಿಸಲು ಬೆಳೆಗಾರರು ಕಸರತ್ತು ನಡೆಸಿದ್ದಾರೆ.</p>.<p>ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಶಿರಂಗಾಲ, ಹುಲುಸೆ, ಕೆರೆಹಳ್ಳಿ ಸುತ್ತಮುತ್ತಲ ಹಳ್ಳಿಗಳ ತೋಟಗಳಲ್ಲಿ ಮಳೆಗಾಲದ ಅತಿಥಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲೇ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಹೈರಣಾಗಿಸಿವೆ.</p>.<p>ಹುಳುಗಳ ಹತೋಟಿಗಾಗಿ ಕಾಫಿ ಮಂಡಳಿಯ ಅಧಿಕಾರಿಗಳು, ಕೀಟ ತಜ್ಞರು ಭೇಟಿ ನೀಡಿ ಪರಿಶೀಲಿಸಿ, ಸಲಹೆಗಳನ್ನು ನೀಡಿದ್ದಾರೆ. ಲಾರ್ವಿನ್ ಮಿಶ್ರಿತ ಆಕರ್ಷಕ ಬಲೆಯ ಮೂಲಕ ಹುಳುಗಳನ್ನು ಹಿಡಿದು ಗುಂಡಿಯಲ್ಲಿ ಉಪ್ಪು ಹಾಕಿ ಮುಚ್ಚುವಂತೆ ಸೂಚಿಸಿದ್ದಾರೆ.</p>.<p>ಹೀಗಾಗಿ, ಬೆಳೆಗಾರರಿಗೆ ಮಳೆಗಾಲದಲ್ಲಿ ಅತಿಯಾದ ಹುಳುಗಳನ್ನು ಹಿಡಿಸುವ ಕೆಲಸದ ಹೊರೆ ಬಿದ್ದಿದೆ. ಹುಳು ಹಿಡಿಯುವ ಮಹಿಳಾ ಕಾರ್ಮಿಕರಿಗೆ ₹ 300, ಪುರುಷ ಕಾರ್ಮಿಕರಿಗೆ ₹ 500 ಕೂಲಿ ನೀಡಬೇಕಿದೆ. ತೌಡಿನ ಜತೆಗೆ ಬೆಲ್ಲ, ಹುಳು ಕೊಲ್ಲುವ ಲಾರ್ವಿನ್ ದ್ರಾವಣ ಮಿಶ್ರ ಮಾಡಿ ಉಂಡೆ ಕಟ್ಟಿ ಅಲ್ಲಲ್ಲಿ ಇರಿಸಿ ಹುಳುಗಳನ್ನು ಆಕರ್ಷಿಸಲಾಗುತ್ತದೆ. ಕೈಗೆ ಗ್ಲೌಸ್ ಧರಿಸಿ ಕಾರ್ಮಿಕರು ಹುಳುಗಳನ್ನು ಸಂಗ್ರಹಿಸಿ ನಂತರ ಗುಂಡಿಯಲ್ಲಿ ಮುಚ್ಚುತ್ತಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೆಳ್ಳಾರಳ್ಳಿಯ ಬೆಳೆಗಾರ ಬಿ.ಎಸ್.ಪ್ರತಾಪ್, ‘ಮಳೆಗಾಲದಲ್ಲಿ ಬೆಳೆಗಾರರು ಅನುಭವಿಸುವ ತೊಂದರೆ ಬಸವನ ಹುಳುಗಳ ಕಾಟ. ಆದರೆ, ಈ ಬಾರಿ ಅವುಗಳ ಕಾಟ ಹೆಚ್ಚಾಗಿದೆ. ಅನಿವಾರ್ಯವಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ (ಕೊಡಗು ಜಿಲ್ಲೆ):</strong> ಎಡೆಬಿಡದೇ ಸುರಿದ ಮಳೆಯಿಂದಾಗಿ ಕೊಡಗು ಜಿಲ್ಲೆಯ ಹಲವೆಡೆ ಬಸವನ ಹುಳುಗಳ ಕಾಟ ಹೆಚ್ಚಾಗಿದೆ. ದಿನ ಬೆಳಗಾಗುವಷ್ಟರಲ್ಲಿ ಕಾಫಿ ತೋಟದಲ್ಲಿರುವ ಗಿಡಗಳ ಎಲೆಗಳನ್ನು, ಕಾಫಿಯ ಹೀಚುಕಾಯಿಯನ್ನು ತಿಂದು ತೇಗುತ್ತಿದ್ದು, ಅವುಗಳನ್ನು ನಾಶಪಡಿಸಲು ಬೆಳೆಗಾರರು ಕಸರತ್ತು ನಡೆಸಿದ್ದಾರೆ.</p>.<p>ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಶಿರಂಗಾಲ, ಹುಲುಸೆ, ಕೆರೆಹಳ್ಳಿ ಸುತ್ತಮುತ್ತಲ ಹಳ್ಳಿಗಳ ತೋಟಗಳಲ್ಲಿ ಮಳೆಗಾಲದ ಅತಿಥಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲೇ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಹೈರಣಾಗಿಸಿವೆ.</p>.<p>ಹುಳುಗಳ ಹತೋಟಿಗಾಗಿ ಕಾಫಿ ಮಂಡಳಿಯ ಅಧಿಕಾರಿಗಳು, ಕೀಟ ತಜ್ಞರು ಭೇಟಿ ನೀಡಿ ಪರಿಶೀಲಿಸಿ, ಸಲಹೆಗಳನ್ನು ನೀಡಿದ್ದಾರೆ. ಲಾರ್ವಿನ್ ಮಿಶ್ರಿತ ಆಕರ್ಷಕ ಬಲೆಯ ಮೂಲಕ ಹುಳುಗಳನ್ನು ಹಿಡಿದು ಗುಂಡಿಯಲ್ಲಿ ಉಪ್ಪು ಹಾಕಿ ಮುಚ್ಚುವಂತೆ ಸೂಚಿಸಿದ್ದಾರೆ.</p>.<p>ಹೀಗಾಗಿ, ಬೆಳೆಗಾರರಿಗೆ ಮಳೆಗಾಲದಲ್ಲಿ ಅತಿಯಾದ ಹುಳುಗಳನ್ನು ಹಿಡಿಸುವ ಕೆಲಸದ ಹೊರೆ ಬಿದ್ದಿದೆ. ಹುಳು ಹಿಡಿಯುವ ಮಹಿಳಾ ಕಾರ್ಮಿಕರಿಗೆ ₹ 300, ಪುರುಷ ಕಾರ್ಮಿಕರಿಗೆ ₹ 500 ಕೂಲಿ ನೀಡಬೇಕಿದೆ. ತೌಡಿನ ಜತೆಗೆ ಬೆಲ್ಲ, ಹುಳು ಕೊಲ್ಲುವ ಲಾರ್ವಿನ್ ದ್ರಾವಣ ಮಿಶ್ರ ಮಾಡಿ ಉಂಡೆ ಕಟ್ಟಿ ಅಲ್ಲಲ್ಲಿ ಇರಿಸಿ ಹುಳುಗಳನ್ನು ಆಕರ್ಷಿಸಲಾಗುತ್ತದೆ. ಕೈಗೆ ಗ್ಲೌಸ್ ಧರಿಸಿ ಕಾರ್ಮಿಕರು ಹುಳುಗಳನ್ನು ಸಂಗ್ರಹಿಸಿ ನಂತರ ಗುಂಡಿಯಲ್ಲಿ ಮುಚ್ಚುತ್ತಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೆಳ್ಳಾರಳ್ಳಿಯ ಬೆಳೆಗಾರ ಬಿ.ಎಸ್.ಪ್ರತಾಪ್, ‘ಮಳೆಗಾಲದಲ್ಲಿ ಬೆಳೆಗಾರರು ಅನುಭವಿಸುವ ತೊಂದರೆ ಬಸವನ ಹುಳುಗಳ ಕಾಟ. ಆದರೆ, ಈ ಬಾರಿ ಅವುಗಳ ಕಾಟ ಹೆಚ್ಚಾಗಿದೆ. ಅನಿವಾರ್ಯವಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>