ಒಂದೆಡೆ ಅಶಕ್ತರಿಗೆ ದಾರಿದೀಪದಂತಿರುವ ದಿವ್ಯಾ ಅವರು ಮತ್ತೊಂದೆಡೆ ಕೊಡಗಿಗೆ ವಿಪತ್ತು ಬಂದಾಗ ಅದರ ನಿರ್ವಹಣೆ
ಯಲ್ಲೂ ತೊಡಗಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಶೌರ್ಯ’ ತಂಡದಲ್ಲಿ ಇವರಿದ್ದಾರೆ. ನಾಪೋಕ್ಲುವಿನಲ್ಲಿ 20 ಯುವಕ, ಯುವತಿಯರ ತಂಡವನ್ನು ಕಟ್ಟಿ ಅದರ ಸಂಯೋಜಕಿ
ಯಾಗಿದ್ದಾರೆ. ಮಳೆ ಮೊದಲಾದ ವಿಪತ್ತು ಬಂದಾಗ ವಿಪತ್ತಿನಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಶಾಲೆಗಳ ದುರಸ್ತಿ, ದೇಗುಲಗಳ ಸ್ವಚ್ಛತಾ ಕಾರ್ಯ, ಬಡ ಮಹಿಳೆಯರಿಗೆ ದಿನಸಿ ವಿತರಣೆ ಸೇರಿದಂತೆ ಅನೇಕ ಸೇವಾಪರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ತಂಡ ಮಾಡಿದ ಕಾರ್ಯಗಳನ್ನು ಜನರು ಈಗಲೂ ನೆನೆಯುತ್ತಾರೆ.