ನವದೆಹಲಿ : ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಪಕ್ಷದ ಹಿರಿಯ ಮುಖಂಡ ಕಮಲ್ನಾಥ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಗೋವಾದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಂತಾರಾಮ್ ನಾಯಕ್ ಸ್ಥಾನಕ್ಕೆ ಗಿರೀಶ್ ಛೋಡ್ಂಕರ್ ಅವರನ್ನು ನೇಮಿಸಿದೆ.
ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮಣಿಸಲು ಕಾಂಗ್ರೆಸ್ ಈಗಿನಿಂದಲೇ ರಣತಂತ್ರ ರೂಪಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ಇದುವರೆಗೂ ಘೋಷಿಸಿಲ್ಲ. ಈ ವಿಷಯದಲ್ಲಿ ಕಮಲ್ನಾಥ್ ಹಾಗೂ ಸಿಂಧಿಯಾ ನಡುವೆ ಈಗಲೂ ಸ್ಪರ್ಧೆಯಿದೆ .