ಬಂಗಾರಪೇಟೆ: ತಾಲ್ಲೂಕಿನ ಯರಗೋಳ್ ಗ್ರಾಮದ ಸಮೀಪ ತೆಂಗಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ.
ಯರಗೋಳ್ ಗ್ರಾಮದ ರಾಮೋಜಿ ರಾವ್, ವೆಂಕೋಬರಾವ್, ವೆಂಕೂಬಾಯಿ ಅವರ ಮೇಲೆ ದಾಳಿ ನಡೆಸಿದೆ.
108 ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗಿದೆ. ವೆಂಕೋಬರಾವ್ ಅವರಿಗೆ ಕೆಮ್ಮು ಇರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗಿದೆ.
ತೋಟದಲ್ಲಿ ಬೆಂಕಿ ಹಾಕಿದ್ದ ಕಾರಣ ಹೆಜ್ಜೇನು ಎದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.