ತ್ರಿಮೂರ್ತಿಗಳನ್ನು ಪರೀಕ್ಷಿಸಲು ಹೋದ ಭೃಗು ಮಹರ್ಷಿಯು ಬ್ರಹ್ಮ ಮತ್ತು ಶಿವನಿಗೆ ಶಾಪವನ್ನಿತ್ತು, ನಂತರ ಮಹಾವಿಷ್ಣುವಿನ ವಕ್ಷ ಸ್ಥಳಕ್ಕೆ ಒದ್ದಾಗ, ಕುಪಿತಗೊಳ್ಳದ ವಿಷ್ಣು, ಉಪಾಯದಿಂದ ಮಹರ್ಷಿಗಳ ಕಾಲಿನಲ್ಲಿರುವ ಜ್ಞಾನ ನೇತ್ರವನ್ನು ಹಾಳು ಮಾಡುತ್ತಾನೆ. ಆಗ ತಪ್ಪಿನ ಅರಿವಾದ ಭೃಗು ಮಹರ್ಷಿ ಕ್ಷಮೆ ಕೇಳಿ, ಶೇಷಾಚಲದಲ್ಲಿ ತಪ್ಪಸ್ಸಿಗೆ ಕುಳಿತುಕೊಳ್ಳುತ್ತಾನೆ ಎಂಬ ಪುರಾಣಿಕೆ ಹಿನ್ನೆಲೆ ಈ ದೇವಸ್ಥಾನಕ್ಕೆ ಇದೆ.