<p><strong>ಬಂಗಾರಪೇಟೆ</strong>: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಾರಹಳ್ಳಿ ವೃತ್ತದಲ್ಲಿ ನೃತ್ಯ ಮಾಡುವ ವಿಚಾರ ಸಂಬಂಧ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ಘಟನೆಯಲ್ಲಿ ನಾಲ್ವರಿಗೆ ಗಾಯಗೊಂಡಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಪಟ್ಟಣದ ಅಮರಾವತಿ ಬಡಾವಣೆಯ ವಿನಾಯಕ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಬುಧವಾರ ವಿಸರ್ಜನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಇದೇ ವೇಳೆ ಬಂಗಾರಪೇಟೆ ರೈಲ್ವೆ ಕ್ವಾಟ್ರಸ್ನ ಪಲವತಿಮ್ಮನಹಳ್ಳಿಯ ಯುವಕರ ಗಣೇಶ ಮೆರವಣಿಗೆಯು ಕಾರಹಳ್ಳಿ ವೃತ್ತದ ಅಯ್ಯಪ್ಪ ದೇವಸ್ಥಾನದ ಬಳಿ ಬಂದಿತು. ಈ ವೇಲೆ ರೈಲ್ವೆ ಕ್ವಾಟ್ರಸ್ ಯುವಕನೊಬ್ಬ ಅಮರಾವತಿ ಬಡಾವಣೆಯ ಯುವಕರ ಬಳಗದ ಗಣೇಶ ಮೆರವಣಿಗೆಯಲ್ಲಿ ಬಂದು ತಾನು ನೃತ್ಯ ಮಾಡಬೇಕು. ತಾನು ಹೇಳಿದಂತೆ ತಮಟೆ ಬಡಿಯಲು ಒತ್ತಾಯಿಸಿದ್ದ.</p>.<p>ಇದಕ್ಕೆ ಅಮರಾವತಿ ಬಡಾವಣೆ ಯುವಕರು ಅಡ್ಡಿಪಡಿಸಿದರು. ಇದು ಮಾತಿಗೆ ಮಾತು ಬೆಳೆಯುತ್ತಿದ್ದಂತೆ ರೈಲ್ವೆ ಕ್ವಾಟ್ರಸ್ ಯುವಕರು ಬಂದು ಅಮರಾವತಿ ಯುವಕರ ಮೇಲೆ ಹಲ್ಲೆ ನಡೆಸಿದ್ದು, ಎರಡು ಗುಂಪಿನ ಯುವಕರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಗಲಾಟೆಯನ್ನು ತಡೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಾರಹಳ್ಳಿ ವೃತ್ತದಲ್ಲಿ ನೃತ್ಯ ಮಾಡುವ ವಿಚಾರ ಸಂಬಂಧ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ಘಟನೆಯಲ್ಲಿ ನಾಲ್ವರಿಗೆ ಗಾಯಗೊಂಡಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಪಟ್ಟಣದ ಅಮರಾವತಿ ಬಡಾವಣೆಯ ವಿನಾಯಕ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಬುಧವಾರ ವಿಸರ್ಜನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಇದೇ ವೇಳೆ ಬಂಗಾರಪೇಟೆ ರೈಲ್ವೆ ಕ್ವಾಟ್ರಸ್ನ ಪಲವತಿಮ್ಮನಹಳ್ಳಿಯ ಯುವಕರ ಗಣೇಶ ಮೆರವಣಿಗೆಯು ಕಾರಹಳ್ಳಿ ವೃತ್ತದ ಅಯ್ಯಪ್ಪ ದೇವಸ್ಥಾನದ ಬಳಿ ಬಂದಿತು. ಈ ವೇಲೆ ರೈಲ್ವೆ ಕ್ವಾಟ್ರಸ್ ಯುವಕನೊಬ್ಬ ಅಮರಾವತಿ ಬಡಾವಣೆಯ ಯುವಕರ ಬಳಗದ ಗಣೇಶ ಮೆರವಣಿಗೆಯಲ್ಲಿ ಬಂದು ತಾನು ನೃತ್ಯ ಮಾಡಬೇಕು. ತಾನು ಹೇಳಿದಂತೆ ತಮಟೆ ಬಡಿಯಲು ಒತ್ತಾಯಿಸಿದ್ದ.</p>.<p>ಇದಕ್ಕೆ ಅಮರಾವತಿ ಬಡಾವಣೆ ಯುವಕರು ಅಡ್ಡಿಪಡಿಸಿದರು. ಇದು ಮಾತಿಗೆ ಮಾತು ಬೆಳೆಯುತ್ತಿದ್ದಂತೆ ರೈಲ್ವೆ ಕ್ವಾಟ್ರಸ್ ಯುವಕರು ಬಂದು ಅಮರಾವತಿ ಯುವಕರ ಮೇಲೆ ಹಲ್ಲೆ ನಡೆಸಿದ್ದು, ಎರಡು ಗುಂಪಿನ ಯುವಕರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಗಲಾಟೆಯನ್ನು ತಡೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>