ರೈತರ ಜೀವನಾಡಿ ಕೆರೆ, ಕುಂಟೆ, ಇದರಲ್ಲಿ ನೀರು ತುಂಬಿದ್ದರೆ ರೈತರು ತರಕಾರಿ, ಸೊಪ್ಪು ಬೆಳೆದು ಜೀವನ ನಡೆಸುವವರು. ಜತೆಗೆ ಹೈನುಗಾರಿಕೆಯನ್ನು ಮಾಡುವವರು. ಆದರೆ ಈ ಬಾರಿ ಮಳೆ ಸಮಸ್ಯೆಯಿಂದ ಕೆರೆಗಳು ಬತ್ತಿದ್ದು ಜಾನುವಾರು ಹಾಗೂ ಪ್ರಾಣಿಗಳಿಗೆ ಕುಡಿಯಲೂ ನೀರು ಸಿಗದಂತಾಗಿದೆ. ಜಾನುವಾರು ಮೇಯಲು ಬಯಲಿಗೆ ಹೋದರೆ ನೀರು ಕುಡಿಯಲು ಮನೆ ಬಳಿಯೇ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನೂ ಕಾಡು ಪ್ರಾಣಿಗಳಿಗೆ ಮೇವು, ನೀರಿನ ಸಮಸ್ಯೆ ತೀರವಾಗಿ ಕಾಡುತ್ತಿದೆ.