ಬೇವಿನ ಹಿಂಡಿ: ‘ಶುಂಠಿ ಬೆಳೆಯಲ್ಲಿ ಮುಖ್ಯವಾಗಿ ಗಡ್ಡೆ ಕೊಳೆ ರೋಗ, ಎಲೆ ಚುಕ್ಕೆ ರೋಗ, ಸೊರಗು ರೋಗ, ಜಂತು ಹುಳುವಿನ ಹಾನಿ, ಕಾಂಡ ಕೊರೆಯುವ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತದೆ. ರಾಸಾಯನಿಕ ಗೊಬ್ಬರ ಬಳಕೆಗಷ್ಟೇ ಒತ್ತು ನೀಡದೆ ಸಮಗ್ರ ನಿರ್ವಹಣಾ ಕ್ರಮ ಅನುಸರಿಸುವುದರಿಂದ ರೋಗ ಮತ್ತು ಕೀಟ ಹತೋಟಿ ಮಾಡಬಹುದು’ ಎಂದು ಸಸ್ಯ ಸಂರಕ್ಷಣೆ ವಿಜ್ಞಾನಿ ಡಿ.ಎಸ್.ಅಂಬಿಕಾ ಹೇಳಿದರು.