ಇವರಿಬ್ಬರೂ ಕಾಮಸಮುದ್ರ ಹೋಬಳಿ ವ್ಯಾಪ್ತಿಯ ಮುಷ್ಟ್ರಹಳ್ಳಿ ಡ್ಯಾಂ ಸಮೀಪದ ಸರ್ಕಾರಿ ಅರಣ್ಯ ಪ್ರದೇಶದ ಒಂದು ಮರದ ಕೆಳಗೆ ಗಾಂಜಾ ಇಟ್ಟುಕೊಂಡು ಕುಳಿತಿದ್ದರು. ಕಾಮಸಮುದ್ರ ಸಿಪಿಐ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಿಎಸ್ಐ ಬಿ.ವಿ.ಕಿರಣ್ ಕುಮಾರ್, ಎಎಸ್ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕೃಷ್ಣ, ರಾಮರಾವ್, ಮಂಜುನಾಥ, ಲಕ್ಷ್ಮಣ್ತೇಲಿ, ಹರೀಶ್ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ. ಎಸ್.ಪಿ ಶಾಂತರಾಜು, ಡಿವೈಎಸ್ಪಿ ವಿ.ಎಲ್.ರಮೇಶ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.