ಕೋಲಾರ: ಬಾಲಕಿ ಅಪಹರಣ ಪ್ರಕರಣ ಸಂಬಂಧ ಸುಂದರ್ ಮತ್ತು ಆನಂದ್ ಎಂಬುವರಿಗೆ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 2 ಸಾವಿರ ದಂಡ ವಿಧಿಸಿ ಶನಿವಾರ ಆದೇಶ ಹೊರಡಿಸಿದೆ.
ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಕರೀಸಂದ್ರ ಗ್ರಾಮದ ಸುಂದರ್ ಮತ್ತು ಆನಂದ್ 2014ರ ಸೆ.20ರಂದು ಗಂಗಸಂದ್ರ ಗ್ರಾಮದ ಬಾಲಕಿಯನ್ನು ಬೈಕ್ನಲ್ಲಿ ಅಪಹರಿಸಿದ್ದರು. ನಂತರ ಬೆಂಗಳೂರು ಮಾರ್ಗವಾಗಿ ಧರ್ಮಸ್ಥಳಕ್ಕೆ ಎಳೆದೊಯ್ದಿದ್ದರು.
ಸುಂದರ್ ಮಗಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬಾಲಕಿ ಪೋಷಕರು ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಸುಂದರ್ ಮತ್ತು ಆನಂದ್ನನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.