<p><strong>ಕೆಜಿಎಫ್</strong>: ಆದಾಯ ಪ್ರಮಾಣ ಪತ್ರ ಮಾಡಿಕೊಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಕೋಪಗೊಂಡ ಅರ್ಜಿದಾರರೊಬ್ಬರು ಕಂದಾಯ ನಿರೀಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದಿದೆ. </p>.<p>ಆ್ಯಂಡರ್ಸನ್ಪೇಟೆ ಲಕ್ಷ್ಮಿ ಟಾಕೀಸ್ ಸಮೀಪದ ವ್ಯಕ್ತಿಯೊಬ್ಬರು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಲವು ದಿನ ಕಳೆದರೂ ಪ್ರಮಾಣಪತ್ರ ಮಂಜೂರು ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅರ್ಜಿದಾರ, ಆಡಳಿತ ಸೌಧಕ್ಕೆ ಬಂದು ಕಂದಾಯ ನಿರೀಕ್ಷಿಕ ಚಂದ್ರಮೋಹನ್ ಜೊತೆಗೆ ವಾಗ್ವಾದಕ್ಕೆ ಇಳಿದರು.</p>.<p>ಈ ವೇಳೆ ಪ್ರತಿಕ್ರಿಯಿಸಿದ ಚಂದ್ರಮೋಹನ್, ಸ್ಥಳ ಪರಿಶೀಲನೆ ಪ್ರಕ್ರಿಯೆ ಮುಗಿದಿದೆ. ಆದರೆ, ಅರ್ಜಿದಾರರು ಬೆಂಗಳೂರು ನಿವಾಸಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಲ್ಲಿ ವಾಸವಿಲ್ಲದ ವ್ಯಕ್ತಿಗೆ ಆದಾಯ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. </p>.<p>ಇದರಿಂದ ಮತ್ತಷ್ಟು ಕ್ರೋಧಗೊಂಡ ಅರ್ಜಿದಾರ, ಕಾಲಿನಲ್ಲಿದ್ದ ಚಪ್ಪಲಿ ತೆಗೆದುಕೊಂಡು ಹೊಡೆಯಲು ಹೋದರು. ಈ ವೇಳೆ ಅಕ್ಕಪಕ್ಕದವರು ಬಂದು ಆತನನ್ನು ತಡೆದರು. ಆತಂಕಗೊಂಡ ಚಂದ್ರಮೋಹನ್ ಅವರು ಅಧಿಕಾರಿಗಳ ಸಭೆ ನಡೆಸುತ್ತಿದ್ದ ಶಾಸಕಿ ಎಂ. ರೂಪಕಲಾ ಶಶಿಧರ್ ಅವರ ಬಳಿ ತೆರಳಿ ಅಳಲು ತೋಡಿಕೊಂಡರು. </p>.<p>ಈ ವೇಳೆ ಅರ್ಜಿದಾರರನ್ನು ಕರೆಸಿದ ಶಾಸಕಿ ರೂಪಕಲಾ, ಈ ರೀತಿ ಮಾಡಬಾರದು ಎಂದು ತಿಳಿಹೇಳಿದರು. ಹೀಗಾಗಿ, ಅರ್ಜಿದಾರನು ಶಾಸಕರ ಸೂಚನೆಯಂತೆ ಅಧಿಕಾರಿ ಬಳಿ ಕ್ಷಮೆ ಕೋರಿದ್ದಾನೆ. </p>.<p>ಈ ಕುರಿತು ಕಂದಾಯ ನಿರೀಕ್ಷಿಕ ದೂರು ಸಲ್ಲಿಸದ ಕಾರಣ, ಪೊಲೀಸ್ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಹಶೀಲ್ದಾರ್ ಎಚ್.ಜೆ. ಭರತ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್</strong>: ಆದಾಯ ಪ್ರಮಾಣ ಪತ್ರ ಮಾಡಿಕೊಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಕೋಪಗೊಂಡ ಅರ್ಜಿದಾರರೊಬ್ಬರು ಕಂದಾಯ ನಿರೀಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದಿದೆ. </p>.<p>ಆ್ಯಂಡರ್ಸನ್ಪೇಟೆ ಲಕ್ಷ್ಮಿ ಟಾಕೀಸ್ ಸಮೀಪದ ವ್ಯಕ್ತಿಯೊಬ್ಬರು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಲವು ದಿನ ಕಳೆದರೂ ಪ್ರಮಾಣಪತ್ರ ಮಂಜೂರು ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅರ್ಜಿದಾರ, ಆಡಳಿತ ಸೌಧಕ್ಕೆ ಬಂದು ಕಂದಾಯ ನಿರೀಕ್ಷಿಕ ಚಂದ್ರಮೋಹನ್ ಜೊತೆಗೆ ವಾಗ್ವಾದಕ್ಕೆ ಇಳಿದರು.</p>.<p>ಈ ವೇಳೆ ಪ್ರತಿಕ್ರಿಯಿಸಿದ ಚಂದ್ರಮೋಹನ್, ಸ್ಥಳ ಪರಿಶೀಲನೆ ಪ್ರಕ್ರಿಯೆ ಮುಗಿದಿದೆ. ಆದರೆ, ಅರ್ಜಿದಾರರು ಬೆಂಗಳೂರು ನಿವಾಸಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಲ್ಲಿ ವಾಸವಿಲ್ಲದ ವ್ಯಕ್ತಿಗೆ ಆದಾಯ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. </p>.<p>ಇದರಿಂದ ಮತ್ತಷ್ಟು ಕ್ರೋಧಗೊಂಡ ಅರ್ಜಿದಾರ, ಕಾಲಿನಲ್ಲಿದ್ದ ಚಪ್ಪಲಿ ತೆಗೆದುಕೊಂಡು ಹೊಡೆಯಲು ಹೋದರು. ಈ ವೇಳೆ ಅಕ್ಕಪಕ್ಕದವರು ಬಂದು ಆತನನ್ನು ತಡೆದರು. ಆತಂಕಗೊಂಡ ಚಂದ್ರಮೋಹನ್ ಅವರು ಅಧಿಕಾರಿಗಳ ಸಭೆ ನಡೆಸುತ್ತಿದ್ದ ಶಾಸಕಿ ಎಂ. ರೂಪಕಲಾ ಶಶಿಧರ್ ಅವರ ಬಳಿ ತೆರಳಿ ಅಳಲು ತೋಡಿಕೊಂಡರು. </p>.<p>ಈ ವೇಳೆ ಅರ್ಜಿದಾರರನ್ನು ಕರೆಸಿದ ಶಾಸಕಿ ರೂಪಕಲಾ, ಈ ರೀತಿ ಮಾಡಬಾರದು ಎಂದು ತಿಳಿಹೇಳಿದರು. ಹೀಗಾಗಿ, ಅರ್ಜಿದಾರನು ಶಾಸಕರ ಸೂಚನೆಯಂತೆ ಅಧಿಕಾರಿ ಬಳಿ ಕ್ಷಮೆ ಕೋರಿದ್ದಾನೆ. </p>.<p>ಈ ಕುರಿತು ಕಂದಾಯ ನಿರೀಕ್ಷಿಕ ದೂರು ಸಲ್ಲಿಸದ ಕಾರಣ, ಪೊಲೀಸ್ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಹಶೀಲ್ದಾರ್ ಎಚ್.ಜೆ. ಭರತ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>