‘ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಮನ್ವಯ ಅಧಿಕಾರಿ (ಇಸಿಒ) ಗಂಗಿರೆಡ್ಡಿ ಧ್ವನಿ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಖಾಸಗಿ ಶಾಲೆಯ ಮಾನ್ಯತೆ ನವೀಕರಣಕ್ಕೆ ಹಣ ಕೇಳಿರುವುದು ಆಡಿಯೊದಲ್ಲಿದೆ. ಈ ಸಂಬಂಧ ಬಿಇಒ ಮೂಲಕವೇ ನೋಟಿಸ್ ಕೊಡಿಸಿದ್ದು, ಸೋಮವಾರದೊಳಗೆ ಉತ್ತರ ನೀಡಲು ಹೇಳಿದ್ದೇನೆ. ಇನ್ನೊಂದು ಬದಿಯಿಂದ ಸಂಭಾಷಣೆ ನಡೆಸಿದ ಖಾಸಗಿ ಶಾಲೆಯ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ’ ಎಂದು ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.