<p><strong>ನಂಗಲಿ</strong>: ಸತತವಾಗಿ ಬೀಳುತ್ತಿರುವ ಭಾರಿ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿವೆ. ಕೋಡಿಯಲ್ಲಿ ಗ್ರಾಮಸ್ಥರು ಮೀನು ಶಿಕಾರಿ ನಡೆಸಿ ಸಂಭ್ರಮಿಸಿದರೆ, ಮೀನು ಹರಾಜುದಾರರು ನಷ್ಟದ ಭೀತಿಯಿಂದ ಕಂಗಲಾಗಿದ್ದಾರೆ.</p>.<p>ವರ್ಷದ ಹಿಂದೆ ಬಿದ್ದ ಮಳೆಗಳಿಗೆ ಕೆರೆ ತುಂಬಿ ಕೋಡಿ ಹರಿದಿದ್ದವು. ಜಿಲ್ಲಾಧಿಕಾರಿ ಆದೇಶದಂತೆ ಕೆರೆಗಳ ನೀರನ್ನು ಕೃಷಿ ಅಥವಾ ಯಾವುದೇ ಚಟುವಟಿಕೆಗಳಿಗಳಿಗೆ ಕೆರೆ ನೀರು ಬಳಸಬಾರದು ಎಂದು ತೂಬುಗಳನ್ನು ಮುಚ್ಚಲಾಗಿತ್ತು. ಈಗ ಸತತ ಸುರಿಯುತ್ತಿರುವ ಮಳೆಗೆ ಕೆರೆಗಳು ಕೋಡಿ ಹರಿಯುತ್ತಿದೆ.</p>.<p>ಮುಷ್ಟೂರು ಮರವೇಮನೆ ಕೆರೆ, ನಂಗಲಿ, ಮಲ್ಲೆಕುಪ್ಪ ಮತ್ತು ನಗವಾರ ಕೆರೆ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಹರಿಯುತ್ತಿದೆ. ಜನ ತಂಡೋಪತಂಡವಾಗಿ ಕೆರೆಕೋಡಿಯನ್ನುಕಣ್ತುಂಬಿಕೊಳ್ಳುತ್ತಿದ್ದಾರೆ. ಜತೆಗೆ ಮೀನು ಬೇಟೆ ನಡೆಸಿ ಖುಷಿ ಪಡುತ್ತಿದ್ದಾರೆ.</p>.<p>ಕೋಡಿಯಲ್ಲಿ ಬರುತ್ತಿರುವ ಮೀನುಗಳನ್ನು ಹಿಡಿಯಲು ಮುಗಿ ಬೀಳುತ್ತಿದ್ದಾರೆ. ಕೆಲವರು ಕೈಗಳಲ್ಲಿಯೇ ಮೀನುಗಳನ್ನು ಹಿಡಿದರೆ, ಮತ್ತೆ ಕೆಲವರು ರೇಷ್ಮೆ ಬಲೆ, ಮೀನು ಬಲೆಗಳಲ್ಲಿ ಮತ್ತೆ ಕೆಲವರು ಟೊಮೆಟೊ ಬಾಕ್ಸ್ಗಳಲ್ಲಿ ಮೀನು ಹಿಡಿಯುತ್ತಿದ್ದಾರೆ.</p>.<p>ವರ್ಷದ ಹಿಂದೆ ಕೆರೆಗಳು ತುಂಬಿದ್ದರಿಂದ ಹರಾಜುದಾರರು ಎಲ್ಲಾ ಕೆರೆಗಳಲ್ಲಿ ಮೀನು ಮರಿ ಬಿಟ್ಟಿದ್ದರು. ಈಗ ಅವು ದೊಡ್ಡದಾಗಿವೆ. ಆದರೆ ಏಕಾಏಕಿ ಭಾರಿ ಮಳೆ ಸುರಿದ ಕಾರಣ ಮೀನುಗಳು ಕೋಡಿಯಲ್ಲಿ ಕೊಚ್ಚಿ ಹೋಗುತ್ತಿರುವುದು ಹರಾಜುದಾರರಲ್ಲಿ ನಷ್ಟದ ಭೀತಿ ಹುಟ್ಟಿಸಿದೆ.</p>.<p>ಲಕ್ಷಾಂತರ ರೂಪಾಯಿ ವ್ಯಹ ಮಾಡಿ ಮೀನು ಹರಾಜು ಕೂಗಿರುವವರು ಕೋಡಿಯಲ್ಲಿ ಮೀನು ಕೊಚ್ಚಿ ಹೋಗುತ್ತಿರುವ ನೋಡಿ ಕೊರಗುವಂತಾಗಿದೆ. ಇದರಿಂದ ಕೆಲವರು ಕೆರೆ ಕೋಡಿಗಳ ಮೇಲೆ ಮೀನುಗಳು ಕೆರೆಗಳಿಂದ ಆಚೆ ಬಾರದಂತೆ ಬಲೆ ಮತ್ತು ಜಾಲರಿ ಅಳವಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಗಲಿ</strong>: ಸತತವಾಗಿ ಬೀಳುತ್ತಿರುವ ಭಾರಿ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿವೆ. ಕೋಡಿಯಲ್ಲಿ ಗ್ರಾಮಸ್ಥರು ಮೀನು ಶಿಕಾರಿ ನಡೆಸಿ ಸಂಭ್ರಮಿಸಿದರೆ, ಮೀನು ಹರಾಜುದಾರರು ನಷ್ಟದ ಭೀತಿಯಿಂದ ಕಂಗಲಾಗಿದ್ದಾರೆ.</p>.<p>ವರ್ಷದ ಹಿಂದೆ ಬಿದ್ದ ಮಳೆಗಳಿಗೆ ಕೆರೆ ತುಂಬಿ ಕೋಡಿ ಹರಿದಿದ್ದವು. ಜಿಲ್ಲಾಧಿಕಾರಿ ಆದೇಶದಂತೆ ಕೆರೆಗಳ ನೀರನ್ನು ಕೃಷಿ ಅಥವಾ ಯಾವುದೇ ಚಟುವಟಿಕೆಗಳಿಗಳಿಗೆ ಕೆರೆ ನೀರು ಬಳಸಬಾರದು ಎಂದು ತೂಬುಗಳನ್ನು ಮುಚ್ಚಲಾಗಿತ್ತು. ಈಗ ಸತತ ಸುರಿಯುತ್ತಿರುವ ಮಳೆಗೆ ಕೆರೆಗಳು ಕೋಡಿ ಹರಿಯುತ್ತಿದೆ.</p>.<p>ಮುಷ್ಟೂರು ಮರವೇಮನೆ ಕೆರೆ, ನಂಗಲಿ, ಮಲ್ಲೆಕುಪ್ಪ ಮತ್ತು ನಗವಾರ ಕೆರೆ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಹರಿಯುತ್ತಿದೆ. ಜನ ತಂಡೋಪತಂಡವಾಗಿ ಕೆರೆಕೋಡಿಯನ್ನುಕಣ್ತುಂಬಿಕೊಳ್ಳುತ್ತಿದ್ದಾರೆ. ಜತೆಗೆ ಮೀನು ಬೇಟೆ ನಡೆಸಿ ಖುಷಿ ಪಡುತ್ತಿದ್ದಾರೆ.</p>.<p>ಕೋಡಿಯಲ್ಲಿ ಬರುತ್ತಿರುವ ಮೀನುಗಳನ್ನು ಹಿಡಿಯಲು ಮುಗಿ ಬೀಳುತ್ತಿದ್ದಾರೆ. ಕೆಲವರು ಕೈಗಳಲ್ಲಿಯೇ ಮೀನುಗಳನ್ನು ಹಿಡಿದರೆ, ಮತ್ತೆ ಕೆಲವರು ರೇಷ್ಮೆ ಬಲೆ, ಮೀನು ಬಲೆಗಳಲ್ಲಿ ಮತ್ತೆ ಕೆಲವರು ಟೊಮೆಟೊ ಬಾಕ್ಸ್ಗಳಲ್ಲಿ ಮೀನು ಹಿಡಿಯುತ್ತಿದ್ದಾರೆ.</p>.<p>ವರ್ಷದ ಹಿಂದೆ ಕೆರೆಗಳು ತುಂಬಿದ್ದರಿಂದ ಹರಾಜುದಾರರು ಎಲ್ಲಾ ಕೆರೆಗಳಲ್ಲಿ ಮೀನು ಮರಿ ಬಿಟ್ಟಿದ್ದರು. ಈಗ ಅವು ದೊಡ್ಡದಾಗಿವೆ. ಆದರೆ ಏಕಾಏಕಿ ಭಾರಿ ಮಳೆ ಸುರಿದ ಕಾರಣ ಮೀನುಗಳು ಕೋಡಿಯಲ್ಲಿ ಕೊಚ್ಚಿ ಹೋಗುತ್ತಿರುವುದು ಹರಾಜುದಾರರಲ್ಲಿ ನಷ್ಟದ ಭೀತಿ ಹುಟ್ಟಿಸಿದೆ.</p>.<p>ಲಕ್ಷಾಂತರ ರೂಪಾಯಿ ವ್ಯಹ ಮಾಡಿ ಮೀನು ಹರಾಜು ಕೂಗಿರುವವರು ಕೋಡಿಯಲ್ಲಿ ಮೀನು ಕೊಚ್ಚಿ ಹೋಗುತ್ತಿರುವ ನೋಡಿ ಕೊರಗುವಂತಾಗಿದೆ. ಇದರಿಂದ ಕೆಲವರು ಕೆರೆ ಕೋಡಿಗಳ ಮೇಲೆ ಮೀನುಗಳು ಕೆರೆಗಳಿಂದ ಆಚೆ ಬಾರದಂತೆ ಬಲೆ ಮತ್ತು ಜಾಲರಿ ಅಳವಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>