ಮುಳಬಾಗಿಲು: ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಮೂಲಕ ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಎಚ್. ನಾಗೇಶ್ ತಿಳಿಸಿದರು.
ತಾಲ್ಲೂಕು ಕೇಂದ್ರವಾದ ಅವಣಿ ಗ್ರಾಮದಲ್ಲಿ ಶನಿವಾರ ₹ 15 ಲಕ್ಷ ವೆಚ್ಚದ ಸಿ.ಸಿ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ, ಹೈಮಾಸ್ಟ್ ದೀಪ ಸೇರಿದಂತೆ ₹ 53 ಲಕ್ಷ ವೆಚ್ಚದ ಶಾಲಾ ಕೊಠಡಿ ಉದ್ಫಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಪರಿಶಿಷ್ಟರ ಕಾಲೊನಿಯ ಪ್ರಮುಖ ರಸ್ತೆ, ನೀರಿನ ಶುದ್ಧೀಕರಣ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದರು.
ಸಂಸದ ಎಸ್. ಮುನಿಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಡಾ.ಎ.ವಿ. ಶ್ರೀನಿವಾಸ್, ಯುವ ಮುಖಂಡ ಆವಣಿ ವಿಜಯ್ಕುಮಾರ್, ಮಂಡಿಕಲ್ ಚಲಪತಿ, ಪಿ.ಎಂ. ಕೃಷ್ಣಮೂರ್ತಿ, ಪೆದ್ದಪ್ಪಯ್ಯ, ಬೈರಪ್ಪ ಹಾಜರಿದ್ದರು.