ನೂತನವಾಗಿ ಆಯ್ಕೆಯಾದವರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಸಿಗಬೇಕು. ಅದರ ಬಗ್ಗೆ ಅರಿವು ಹೊಂದಿರಬೇಕು. ಆದ್ದರಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಸದಸ್ಯರು ಯಾವುದೇ ಕಾರಣಕ್ಕೂ ಶಿಬಿರಕ್ಕೆ ಗೈರು
ಹಾಜರಾಗಬಾರದು. ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಪಶು ಸಂಗೋಪನೆ, ಜಲ ರಕ್ಷಣೆ, ದನದ ಶೆಡ್, ಬದು ನಿರ್ಮಾಣ ಸೇರಿ ಕೃಷಿ ಸಂಬಂಧಿತ ಮಾಹಿತಿಗಳನ್ನು ತರಬೇತಿ ಶಿಬಿರದಲ್ಲಿ ಸದಸ್ಯರಿಗೆ ನೀಡಲಾಗುವುದು. ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಸದಸ್ಯರು ಮಾಡಬೇಕು ಎಂದುಸಲಹೆ ನೀಡಿದರು.