ಈ ನಡುವೆ ಕ್ಲಾಕ್ಟವರ್ಗೆ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದು ರಾಷ್ಟ್ರಧ್ವಜ ಹಾರಿಸುವಂತೆ ಆಗ್ರಹಿಸಿ ಸೋಮವಾರದಿಂದ (ಮಾರ್ಚ್ 21) ಧರಣಿ ನಡೆಸುವುದಾಗಿ ಸಂಸದ ಎಸ್.ಮುನಿಸ್ವಾಮಿ ಗುಡುಗಿದ್ದರು. ಇದಕ್ಕೆ ಅವಕಾಶ ನೀಡದ ಜಿಲ್ಲಾಡಳಿತವು ಮುಸ್ಲಿಂ ಸಮುದಾಯ ಹಾಗೂ ಅಂಜುಮಾನ್ ಇಸ್ಲಾಮಿಯ ಸಂಘಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಲಾಕ್ಟವರ್ನಲ್ಲಿ ಶನಿವಾರ ರಾಷ್ಟ್ರಧ್ವಜ ಹಾರಿಸುವ ಮೂಲಕ ಶಾಂತಿಯುತವಾಗಿ ವಿವಾದ ಅಂತ್ಯಗೊಳಿಸಿತು.