ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿಎಎ ಕಾಯ್ದೆ ಬೆಂಬಲಿಸಿ ಜನಾಂದೋಲನ ನಡೆಸಲು ಭಾರತೀಯ ಹಿತರಕ್ಷಣಾ ವೇದಿಕೆಯ ತಿಮ್ಮರಾಯಪ್ಪ ಎಂಬುವರು ಇಲಾಖೆಯ ಅನುಮತಿ ಕೋರಿದ್ದರು. ಅವರಿಗೆ ಎಂ.ಜಿ ರಸ್ತೆಯ ಚಂಪಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ಅನುಮತಿ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸದಂತೆ ಅವರಿಗೆ ಸ್ಪಷ್ಟವಾಗಿ ಸೂಚಿಸಲಾಗಿತ್ತು’ ಎಂದು ಹೇಳಿದರು.