ಬಳಿಕ ಮಾತನಾಡಿದ ಷಡಕ್ಷರಿ, ‘ಪಾರದರ್ಶಕ ಆಡಳಿತದ ಮೂಲಕ ನೌಕರರ ಸಂಘದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಈ ಹಿಂದೆ ಆಡಳಿತ ನಡೆಸಿದವರು ಅಧಿಕಾರದಿಂದ ಇಳಿಯುವಾಗ ಬ್ಯಾಂಕ್ ಖಾತೆ ಖಾಲಿ ಇರುತ್ತಿತ್ತು. ನಾವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲಿ ₹ 16 ಕೋಟಿ ಸಂಗ್ರಹಿಸಿ ಉಳಿಸಿದ್ದೇವೆ’ ಎಂದು ತಿಳಿಸಿದರು.