<p><strong>ಬಂಗಾರಪೇಟೆ:</strong> ಪಟ್ಟಣದ ಗಾಯತ್ರಿ ದೇಗುಲದ ಬಳಿ ರಾಜಕಾಲುವೆಗೆ ಮಣ್ಣು ತಳ್ಳಿ ನಿವೇಶನ ವಿಂಗಡಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.</p>.<p>ಪಟ್ಟಣದ ದೊಡ್ಡಕೆರೆ ಮತ್ತು ಅತ್ತಿಗಿರಿಕೊಪ್ಪ ಕೆರೆಗೆ ಸಂಪರ್ಕ ಕಲ್ಪಿಸುವ ವಿಸ್ತಾರವಾದ ಈ ರಾಜಕಾಲುವೆ ಅಮರಾವತಿ ನಗರ, ಕುಪ್ಪಸ್ವಾಮಿ ಮದುಲಿಯಾರ್ ಬಡಾವಣೆ, ಮುನಿಯಮ್ಮ ಬಡಾವಣೆ ಸೇರಿದಂತೆ ಕೆಲ ಬಡಾವಣೆಗಳ ಮೂಲಕ ಹಾದುಹೋಗಿದೆ.</p>.<p>ಪ್ರಸ್ತುತ ಕಾಲುವೆಗೆ ಮಣ್ಣು ತಳ್ಳಿರುವ ಜಾಗವನ್ನು ಕಬಳಿಸಲು ಹಲವು ವರ್ಷದಿಂದ ಪ್ರಯತ್ನ ನಡೆದಿದೆ. ಗಾಯತ್ರಿ ವಿಪ್ರಭವನದ ಪೂರ್ವಕ್ಕೆ ಸುಮಾರು 150 ಅಡಿ ವಿಸ್ತಾರವಾದ ಕಾಲುವೆ ಜಾಗವಿದ್ದು, ಅದನ್ನು ನಿವೇಶನವನ್ನಾಗಿ ವಿಂಗಡಿಸಿ ಕೋಟಿಗಟ್ಟಲೆ ಲಾಭ ಗಳಿಸುವ ಹುನ್ನಾರ ನಡೆದಿದೆ.</p>.<p>ಪ್ರಜಾವಾಣಿ ವರದಿ: ಡಿ.ಕೆ.ರವಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಇದೇ ಜಾಗದಲ್ಲಿ ಮಣ್ಣುರಾಶಿ ಹಾಕಿ ಕಾಲುವೆ ಮಚ್ಚುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ಕೂಡಲೆ ಎಚ್ಚೆತ್ತುಕೊಂಡ ಅಂದಿನ ಪುರಸಭೆ ಅಧಿಕಾರಿಗಳು ಕಾಲುವೆಗೆ ಮಣ್ಣು ಹಾಕದಂತೆ<br />ತಡೆದಿದ್ದರು.</p>.<p>ಆರು ವರ್ಷದಿಂದ ತಟಸ್ಥವಾಗಿದ್ದ ಪ್ರಭಾವಿ ವ್ಯಕ್ತಿ ಈಗ ಏಕಾಏಕಿ ಕಾಲುವೆಗೆ ಮಣ್ಣು ಸುರಿದು ನಿವೇಶನ ವಿಂಗಡಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ಕಾಲುವೆ ಒತ್ತುವರಿಯಿಂದಾಗಿ ಸುಮಾರು 150 ಅಡಿ ವಿಸ್ತಾರವಾದ ಕಾಲುವೆ ಕೆಲವೆಡೆ 40-50 ಅಡಿಗೆ ಕುಗ್ಗಿದೆ.</p>.<p>ಹದ್ದು ಮೀರಿದ ಹಳ್ಳ: ಸುಮಾರು 25ಕ್ಕಿಂತ ಹೆಚ್ಚು ಕೆರೆಗಳಲ್ಲಿನ ನೀರು ಕಾಲುವೆಯಲ್ಲಿ ಹರಿಯಲಿದ್ದು ‘ಹದ್ದು ಮೀರಿದ ಹಳ್ಳ’ ಎನ್ನುವ ಹೆಸರಿದೆ. 2005ರಲ್ಲಿ ಅತಿವೃಷ್ಠಿಯಾದ ಸಂದರ್ಭದಲ್ಲಿ ಕಾಲುವೆ ಸಮೀಪದ ಮೂರು ನಗರಗಳ ಬಹುತೇಕ ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು.</p>.<p>ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್, ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಕಾಲುವೆ ವಿಸ್ತರಣೆಗೆ ₹50 ಲಕ್ಷ ಅನುದಾನ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಲುವೆ ವಿಸ್ತರಣೆ ಕಾರ್ಯ ಮಾತ್ರ ನಡೆದಿಲ್ಲ ಎನ್ನುವುದು ಸ್ಥಳೀಯರ ಕೊರುಗು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ಪಟ್ಟಣದ ಗಾಯತ್ರಿ ದೇಗುಲದ ಬಳಿ ರಾಜಕಾಲುವೆಗೆ ಮಣ್ಣು ತಳ್ಳಿ ನಿವೇಶನ ವಿಂಗಡಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.</p>.<p>ಪಟ್ಟಣದ ದೊಡ್ಡಕೆರೆ ಮತ್ತು ಅತ್ತಿಗಿರಿಕೊಪ್ಪ ಕೆರೆಗೆ ಸಂಪರ್ಕ ಕಲ್ಪಿಸುವ ವಿಸ್ತಾರವಾದ ಈ ರಾಜಕಾಲುವೆ ಅಮರಾವತಿ ನಗರ, ಕುಪ್ಪಸ್ವಾಮಿ ಮದುಲಿಯಾರ್ ಬಡಾವಣೆ, ಮುನಿಯಮ್ಮ ಬಡಾವಣೆ ಸೇರಿದಂತೆ ಕೆಲ ಬಡಾವಣೆಗಳ ಮೂಲಕ ಹಾದುಹೋಗಿದೆ.</p>.<p>ಪ್ರಸ್ತುತ ಕಾಲುವೆಗೆ ಮಣ್ಣು ತಳ್ಳಿರುವ ಜಾಗವನ್ನು ಕಬಳಿಸಲು ಹಲವು ವರ್ಷದಿಂದ ಪ್ರಯತ್ನ ನಡೆದಿದೆ. ಗಾಯತ್ರಿ ವಿಪ್ರಭವನದ ಪೂರ್ವಕ್ಕೆ ಸುಮಾರು 150 ಅಡಿ ವಿಸ್ತಾರವಾದ ಕಾಲುವೆ ಜಾಗವಿದ್ದು, ಅದನ್ನು ನಿವೇಶನವನ್ನಾಗಿ ವಿಂಗಡಿಸಿ ಕೋಟಿಗಟ್ಟಲೆ ಲಾಭ ಗಳಿಸುವ ಹುನ್ನಾರ ನಡೆದಿದೆ.</p>.<p>ಪ್ರಜಾವಾಣಿ ವರದಿ: ಡಿ.ಕೆ.ರವಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಇದೇ ಜಾಗದಲ್ಲಿ ಮಣ್ಣುರಾಶಿ ಹಾಕಿ ಕಾಲುವೆ ಮಚ್ಚುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ಕೂಡಲೆ ಎಚ್ಚೆತ್ತುಕೊಂಡ ಅಂದಿನ ಪುರಸಭೆ ಅಧಿಕಾರಿಗಳು ಕಾಲುವೆಗೆ ಮಣ್ಣು ಹಾಕದಂತೆ<br />ತಡೆದಿದ್ದರು.</p>.<p>ಆರು ವರ್ಷದಿಂದ ತಟಸ್ಥವಾಗಿದ್ದ ಪ್ರಭಾವಿ ವ್ಯಕ್ತಿ ಈಗ ಏಕಾಏಕಿ ಕಾಲುವೆಗೆ ಮಣ್ಣು ಸುರಿದು ನಿವೇಶನ ವಿಂಗಡಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ಕಾಲುವೆ ಒತ್ತುವರಿಯಿಂದಾಗಿ ಸುಮಾರು 150 ಅಡಿ ವಿಸ್ತಾರವಾದ ಕಾಲುವೆ ಕೆಲವೆಡೆ 40-50 ಅಡಿಗೆ ಕುಗ್ಗಿದೆ.</p>.<p>ಹದ್ದು ಮೀರಿದ ಹಳ್ಳ: ಸುಮಾರು 25ಕ್ಕಿಂತ ಹೆಚ್ಚು ಕೆರೆಗಳಲ್ಲಿನ ನೀರು ಕಾಲುವೆಯಲ್ಲಿ ಹರಿಯಲಿದ್ದು ‘ಹದ್ದು ಮೀರಿದ ಹಳ್ಳ’ ಎನ್ನುವ ಹೆಸರಿದೆ. 2005ರಲ್ಲಿ ಅತಿವೃಷ್ಠಿಯಾದ ಸಂದರ್ಭದಲ್ಲಿ ಕಾಲುವೆ ಸಮೀಪದ ಮೂರು ನಗರಗಳ ಬಹುತೇಕ ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು.</p>.<p>ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್, ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಕಾಲುವೆ ವಿಸ್ತರಣೆಗೆ ₹50 ಲಕ್ಷ ಅನುದಾನ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಲುವೆ ವಿಸ್ತರಣೆ ಕಾರ್ಯ ಮಾತ್ರ ನಡೆದಿಲ್ಲ ಎನ್ನುವುದು ಸ್ಥಳೀಯರ ಕೊರುಗು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>