ರೇಷ್ಮೆ ಸೊಪ್ಪು, ಹುಳುವಿಗೆ ರೋಗ: ಬೆಲೆಯೂ ಇಲ್ಲ, ಇಳುವರಿಯೂ ಇಲ್ಲ
ಎಸ್.ಎಂ. ಅಮರ್
Published : 3 ಜನವರಿ 2026, 7:10 IST
Last Updated : 3 ಜನವರಿ 2026, 7:10 IST
ಫಾಲೋ ಮಾಡಿ
Comments
ಶೆಟ್ಟಿಹಳ್ಳಿ ಗ್ರಾಮದ ರೈತರ ತೋಟದಲ್ಲಿ ಹಿಪ್ಪು ನೇರಳೆ ಸೊಪ್ಪಿಗೆ ಸುಳಿ ಕೊರೆತ ಹುಳುಗಳ ಬಾಧೆ
ಜಿಲ್ಲೆಯ ವಾತಾವರಣದಲ್ಲಿ ಚಳಿ ಹೆಚ್ಚಾಗಿರುವುದರಿಂದ ಸಹಜವಾಗಿ ರೇಷ್ಮೆ ಹುಳು ಹಣ್ಣಾಗುವ ಸಮಯ ಕೆಲವು ದಿನಗಳು ನಿಧಾನವಾಗುತ್ತದೆ. ಹಾಗಾಗಿ ರೈತರು ಹುಳು ಸಾಕಾಣಿ ಮನೆಗಳಲ್ಲಿ 25 ರಿಂದ 26 ಡಿಗ್ರಿವರೆಗೆ ಉಷ್ಣಾಂಶ ಕಾಪಾಡಿಕೊಳ್ಳಿ.
– ಬೈರೇಗೌಡ, ರೇಷ್ಮೆ ಸಹಾಯಕ ನಿರ್ದೇಶಕರು ಕೋಲಾರ
ವೇಮಗಲ್ ಹೋಬಳಿಯಲ್ಲಿ ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರಿಗಾಗಿ ಯಾವುದೇ ಸಭೆಗಳನ್ನು ಏರ್ಪಡಿಸಿಲ್ಲ. ಇದರಿಂದ ರೈತರಿಗೆ ರೇಷ್ಮೆ ಇಲಾಖೆಯ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಉನ್ನತ ಅಧಿಕಾರಿಗಳ ಈ ಬಗ್ಗೆ ಗಮನಹರಿಸಬೇಕು
– ಬೈರೇಗೌಡ, ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ರೇಷ್ಮೆ ಬೆಳೆಗಾರರು ಪುರಹಳ್ಳಿ
ರೇಷ್ಮೆ ಬೆಳೆಗಾರರ ಹಿತ ಕಾಯಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಇಲಾಖೆಯ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ತಾಂತ್ರಿಕ ನೆರವು ನೀಡಬೇಕು. ಇಲ್ಲದಿದ್ದರೆ ರೇಷ್ಮೆ ಬೆಳೆಗಾರರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
– ರಾಮು ಶಿವಣ್ಣ, ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ