ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿಗಳಾದ ರಾಜೇಶ್, ಶಿವಾನಂದ, 5ನೇ ತರಗತಿ ವಿದ್ಯಾರ್ಥಿ ಸುನಿಲ್, ಶನಿವಾರ ಬೆಳಿಗ್ಗೆ ರೈಲು ಹಳಿ ಪಕ್ಕದ ದಾರಿಯಲ್ಲಿ ಹೊಲದ ಕಡೆ ಹೆಜ್ಜೆ ಹಾಕಿದ್ದರು. ಆಗ ಸಮಯ ಬೆಳಿಗ್ಗೆ 6.30. ದೂರದಲ್ಲಿ ಕೋಲಾರದಿಂದ ಬೆಂಗಳೂರಿಗೆ ಹೋಗುವ ರೈಲಿನ ಸಿಳ್ಳು ಕೇಳಿಸಿತು. ಬಾಲಕರು ರೈಲನ್ನು ನೋಡುವ ಕುತೂಹಲದಿಂದ ಹಳಿಗೆ ತುಸು ದೂರದಲ್ಲಿ ನಿಂತರು.