ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದ ಅರುಣ್ ಅಲಿಯಾಸ್ ಅರುಣ್ ಕುಮಾರ್ (28) ಹಾಗೂ ಖಾದ್ರಿಪುರ ಗ್ರಾಮದ ಶಿವರಾಜು (28) ಗಡಿಪಾರಿಗೆ ಒಳಗಾದವರು. ಅಲ್ಲದೇ, ಶಿವರಾಜು ಹಾಗೂ ಮತ್ತೊಬ್ಬ ಆರೋಪಿ, ಕೋಲಾರ ನಗರದ ಕಾರಂಜಿಕಟ್ಟೆಯ ಎಂ. ಮಂಜುನಾಥ್ ಅಲಿಯಾಸ್ ಕಚ್ಚಾ ಮಂಜು (37) ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಕೂಡ ಸಲ್ಲಿಸಿದ್ದಾರೆ.