ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಲ್ಲಪ್ಪ ಬಂಡಿ, ‘ಕರ್ನಾಟಕ ವಿ.ವಿ.ಯ ಧಾರವಾಡ ಕ್ಯಾಂಪಸ್ನಲ್ಲೇ ವಸತಿ
ಗೃಹಗಳು ಇವೆ. ಹೀಗಾಗಿ, ಹೆಚ್ಚು ಪ್ರಯಾಣಿಸುವ ಅವಶ್ಯಕತೆ ಇರುವುದಿಲ್ಲ. ನನಗಾಗುತ್ತಿರುವ ತೊಂದರೆ ಕುರಿತು ವರದಿ ಪ್ರಕಟಿಸಿದ ‘ಪ್ರಜಾವಾಣಿ’ಗೂ, ಶಿಫಾರಸು ಮಾಡಿದ ಬಸವರಾಜ ಹೊರಟ್ಟಿ ಅವರಿಗೂ, ವರ್ಗಾವಣೆ ಮಾಡಿದ ಕುಲಪತಿಗಳಿಗೂ ಋಣಿಯಾಗಿದ್ದೇನೆ. ಮುಖ್ಯ ಕ್ಯಾಂಪಸ್ಗೆ ಬರುವುದರಿಂದ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ’ ಎಂದರು.